Advertisement

ರಬಕವಿ-ಬನಹಟ್ಟಿ: ಮಳೆಗೆ ಮನೆಗಳು ಕುಸಿದು ಹಾನಿ; ಓರ್ವ ಯುವತಿಗೆ ಗಾಯ

09:47 PM Jul 27, 2023 | Team Udayavani |

ರಬಕವಿ-ಬನಹಟ್ಟಿ: ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ನಿರಂತರವಾದ ಮಳೆಗೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಇಂದು ಗುರುವಾರ ೫ ಮನೆ ಸೇರಿದಂತೆ ಒಟ್ಟು 11ಕ್ಕೂ ಹೆಚ್ಚೂ ಮನೆಗಳು ಬಾಗಶಃ ಹಾನಿ ಹಾಗೂ ತೇರದಾಳದ ಅಶ್ವಿನಿ ಎಂಬ ಯುವತಿಗೆ ಮೇಲ್ಚಾವಣಿ ಕುಸಿದು ಗಾಯವಾದ ಬಗ್ಗೆ ವರದಿಯಾಗಿದೆ.

Advertisement

ತೇರದಾಳ ಗ್ರಾಮದಲ್ಲಿ ಮಳೆಯಿಂದ ಮೇಲ್ಚಾವಣಿ ಬಿದ್ದು ಕು. ಅಶ್ವಿನಿ ದುಂಡಯ್ಯ ಮಠಪತಿ ಇವಳು ಮೇಲ್ಚಾವಣಿ ಅಡಿಯಲ್ಲಿ ಸಿಲುಕಿ ಗಾಯಗೊಂಡ ಹಿನ್ನಲೆಯಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಡಾ. ಡಿ. ಎಚ್. ಹೂಗಾರ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಯೋಗ ಕ್ಷೇಮ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next