Advertisement

ರಾಯಣ್ಣ ಯುವ ಸೇನೆ ನಿರಶನ

04:03 PM Dec 22, 2021 | Team Udayavani |

ಸುರಪುರ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿ, ಕನ್ನಡ ಧ್ವಜವನ್ನು ಸುಟ್ಟು ಹಾಕಿದ ಎಂಇಎಸ್‌ ಪುಂಡರನ್ನು ಕೂಡಲೆ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಎಂಇಎಸ್‌ ಸಂಘಟನೆ ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ಯುವ ಸೇನೆ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

Advertisement

ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಸಮಾವೇಶಗೊಂಡು ಒಂದು ಗಂಟೆಗೂ ಅಧಿಕ ಸಮಯ ಪ್ರತಿಭಟಿಸಿದರು.

ಟೈರ್‌ಗಳಿಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್‌ ಕಚೇರಿ ಶಿರಸ್ತೇದಾರ ಸೋಮನಾಥ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಕೃಷ್ಣಾ ಬಾದ್ಯಾಪುರ, ರವಿನಾಯಕ ಬೈರಿಮಡ್ಡಿ ಕಾಳಪ್ಪ ಕವಾತಿ, ಭೀಮಣ್ಣ ಮೂಲಿಮನಿ, ಆನಂದ ಸಾಹು, ಶಿವರಾಯ ಕಾಡ್ಲೂರ, ಸಿದ್ರಾಮ ಎಲಿಗಾರ, ಅನಿಲಗೌಡ ಬರಾದಾರ, ವಾಸು ಕೆಂಗೂರಿ, ಶರಣಪ್ಪ ಡಿಬಾಸ್‌, ಮಲ್ಲು ನಾಯಕ ಕಬಾಡಗೇರಾ, ವೆಂಕಟೇಶ ಕೊಳ್ಳಿ, ಮಾನಯ್ಯ ನಾಗರಾಳ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next