Advertisement

ಅಶೋಕ್‌ ಪ್ರಾಮಾಣಿಕ;ಅನಂತ್‌,ನಿರ್ಮಲಾ ಬರದಿದ್ದ ಕಾರಣ ಹಿನ್ನಡೆಯಾಗಿದೆ

02:21 PM Sep 30, 2018 | |

ಬೆಂಗಳೂರು: ಬಿಬಿಎಂಪಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಆರ್‌.ಅಶೋಕ್‌ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರ ವಿರುದ್ಧ  ಹಗುರವಾಗಿ ಮಾತನಾಡುವುದು ಶೋಭೆ ತರುವುದಿಲ್ಲ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. 

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ಅಶೋಕ್‌ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಮಾಣಿಕ ಪ್ರಯತ್ನ ಮಾಡಿದ್ದರು. ಅನಿವಾರ್ಯ ಕಾರಣದಿಂದಾಗಿ ಅನಂತ್‌ ಕುಮಾರ್‌ ಮತ್ತು ನಿರ್ಮಲಾ ಸೀತಾರಾಮನ್‌ ಅವರು ಬರದೇ ಇದ್ದ ಕಾರಣ ನಮಗೆ ಹಿನ್ನಡೆಯಾಯಿತು. ಒಳ್ಳೆಯ ಆಡಳಿತ ಕೊಡಲು ಅವಕಾಶವೊಂದಿತ್ತು ಎಂದರು. 

ಅಶೋಕ್‌ ಅವರನ್ನು ಟೀಕೆ ಮಾಡುವ ಅಗತ್ಯ ಇಲ್ಲ. ಅವರ ವಿರುದ್ಧ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎನ್ನುವ ಮೂಲಕ ಟೀಕೆ ಮಾಡಿದ್ದ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next