Advertisement

ಎದ್ದೇಳೊ ನಿದ್ರಾಮಯ್ಯ..!: ಮಂಗಳೂರು ಚಲೋದಲ್ಲಿ ಆರ್‌ ಅಶೋಕ್‌

11:51 AM Sep 07, 2017 | Team Udayavani |

ಮಂಗಳೂರು: ಎದ್ದೇಳು ನಿದ್ರಾಮಯ್ಯ ..ಎದ್ದೇಳೊ ನಿದ್ರಾಮಯ್ಯ.. ಇದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದ ಪರಿ . 

Advertisement

ಬಿಜೆಪಿ ಯುವಮೋರ್ಚಾ ನಡೆಸುತ್ತಿರುವ ಮಂಗಳೂರು ಚಲೋ ರ‍್ಯಾಲಿಯನ್ನುದ್ದೇಶಿ ಮಾತನಾಡಿದ ಆರ್‌ .ಅಶೋಕ್‌ ಪೊಲೀಸರೇ ನಿಮ್ಮಲ್ಲಿ ನನ್ನ ವಿನಂತಿ. ಸಿದ್ದರಾಮಯ್ಯ ಸರ್ಕಾರ ಇನ್ನು ಕೇವಲ 4 ತಿಂಗಳು ಮಾತ್ರ. ಸಮೀಕ್ಷೆಯಲ್ಲಿ ಹೇಳಲಾಗಿದೆ, ಬಿಜೆಪಿ 113 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಹೀಗಾಗಿ ಪೊಲೀಸರು ಕಾನೂನು ಪ್ರಕಾರ ನಡೆದುಕೊಳ್ಳಿ, ಕಾನೂನು ಮೀರಿ ನಮ್ಮನ್ನು ತಡೆಯಬೇಡಿ ಎಂದರು. 

‘ಕಾಂಗ್ರೆಸ್‌ನ ಚಟ್ಟ ಹೊರಲು ನಾಲ್ಕು ಜನ ಸಿದ್ದವಾಗಿದ್ದಾರೆ. ಹೀಗಾಗಿ ನಾವೆಲ್ಲಾ ಈಗ ಏನ್‌ ಹೇಳ್‌ಬೇಕು ಗೊತ್ತಾ? ಸಿದ್ದರಾಮಯ್ಯ ಅಲ್ಲ ನಿದ್ರಾಮಯ್ಯ ಎದ್ದೇಳು ..ನಿದ್ರಾಮಯ್ಯ ಎದ್ದೇಳೊ… ಎಂದು ಘೋಷಣೆ ಕೂಗಿದರು. 

 ‘ನಮ್ಮ ಹೋರಾಟ ಪೊಲೀಸರ ವಿರುದ್ಧ ಅಲ್ಲ. ಪೊಲೀಸ್‌ ಇಲಾಖೆ ಸೇರಿಕೊಂಡಿರುವ ಸಿದ್ದರಾಮಯ್ಯ , ರಾಮಲಿಂಗಾ ರೆಡ್ಡಿ  ಮತ್ತು ಕೆಂಪಯ್ಯ ವಿರುದ್ಧ’ ಎಂದರು. 

‘ಜಿಲ್ಲಾ ಉಸ್ತುವಾರಿ ಸಚಿವ ರಮನಾಥ್‌ ರೈ  ಮಕ್ಕಳಿಗೆ ಕೊಡುವ ಅನ್ನ ಕಸಿದಿದ್ದಾರೆ . ಮುಂದಿನ ಜನ್ಮ ಅಲ್ಲ ಈ ಜನ್ಮದಲ್ಲಿ ಅನ್ನ ಸಿಗುವುದಿಲ್ಲ ..ಇಂಥಹವರು ನಮ್ಮ ಜಿಲ್ಲಾ ಮಂತ್ರಿಗಳು. ಜಿಲ್ಲೆಯಲ್ಲಿ ನಡೆದ ಎಲ್ಲಾ  ಅಹಿತಕರ ಘಟನೆಗಳಿಗೂ ಸಚಿವರಾದ ಯು.ಟಿ.ಖಾದರ್‌ ಮತ್ತು ರಮನಾಥ ರೈ ಅವರೇ ಕಾರಣ’ ಎಂದು ಕಿಡಿಕಾರಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next