Advertisement

ಕಣಿವೆಯಲ್ಲಿ ಶಾಂತಿಯುತ ಪರಿಸ್ಥಿತಿ

11:47 PM Aug 06, 2019 | Team Udayavani |

ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ, ಅದನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ ಘೋಷಿಸಿದ್ದರೂ, ಕಣಿವೆ ರಾಜ್ಯದಲ್ಲಿ ಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅದನ್ನು ಅಲ್ಲಿನ ಪೊಲೀಸ್‌ ಮಹಾನಿರ್ದೇಶಕರಾದ ದಿಲ್‌ಬಾಘ್ ಸಿಂಗ್‌ ಖಚಿತ ಪಡಿಸಿ ದ್ದಾರೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ, ಎಲ್ಲ ಕಡೆ ಪೊಲೀಸ್‌ ಬಿಗಿಭದ್ರತೆಯಿದೆ.

Advertisement

ತುರ್ತು ಕೆಲಸಕ್ಕೆ ತೆರಳಬೇಕಾದವರಿಗೆ ಮಾತ್ರ, ಷರತ್ತಿನೊಂದಿಗೆ ಹೊರ ಹೋ ಗಲು ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಶ್ರೀನಗರದಲ್ಲಿ ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದೆ. ಜಮ್ಮು ಭಾಗದ ಕಿಶ್ವಾರ್‌ ಮತ್ತು ರಜೌರಿಯಲ್ಲಿ ರಾತ್ರಿ ಹೊತ್ತು ಕರ್ಫ್ಯೂ ವಿಧಿಸಲಾಗಿದೆ. ರಾಜ್ಯದ ಎಲ್ಲ ಭಾಗದಲ್ಲಿ ಸೆಕ್ಷನ್‌ 144 ಜಾರಿಯಲ್ಲಿದೆ.

ಅಶಾಂತಿಗೆ ಕಾರಣವಾಗಬಹುದಾದ ಓಮರ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿಯ ಬಂಧನವನ್ನು ಮುಂದುವರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇನ್ನಿಬ್ಬರು ನಾಯಕರಾದ ಸಜ್ಜದ್‌ ಲೋನ್‌, ಇಮ್ರಾನ್‌ ಅನ್ಸಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನರಿಗೂ ಮನವಿ ಮಾಡಲಾಗಿದೆ. ಅದಕ್ಕೆ ಜನತೆ ಸ್ಪಂದಿಸುತ್ತಿದ್ದಾರೆ. ರಾಜಧಾನಿ ಶ್ರೀನಗರದಲ್ಲಿ ಯಾವುದೇ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next