Advertisement

SC: ಮಹುವಾ ಅರ್ಜಿ ಬಗ್ಗೆ ಶೀಘ್ರ ತೀರ್ಮಾನ: ಸುಪ್ರೀಂಕೋರ್ಟ್‌

11:08 PM Dec 13, 2023 | Team Udayavani |

ನವದೆಹಲಿ: “ಪ್ರಶ್ನೆಗಾಗಿ ಲಂಚ” ಪ್ರಕರಣದಲ್ಲಿ ಸಂಸತ್‌ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಿರುವುದನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ತಿಳಿಸಿದ್ದಾರೆ.

Advertisement

ಮಹುವಾ ಮೊಯಿತ್ರಾ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ನ್ಯಾಯಪೀಠವು, “ಈ ವಿಷಯವನ್ನು ನೋಂದಾಯಿಸದೆ ಇರಬಹುದು. ಆದರೆ ಇ-ಮೇಲ್‌ ಕಳುಹಿಸಿದ್ದರೆ ನಾವು ಅದನ್ನು ತಕ್ಷಣ ನೋಡುತ್ತೇನೆ. ಅದನ್ನು ಕಳುಹಿಸಿ’ ಎಂದು ಮೊಯಿತ್ರಾ ಪರ ವಕೀಲರಾದ ಅಭಿಷೇಕ್‌ ಸಿಂಘ್ವಿ ಅವರಿಗೆ ತಿಳಿಸಿತು.  ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ತನಿಖೆ ನಡೆಸಿದ್ದ ನೈತಿಕ ಸಮಿತಿಯ ವರದಿಯನ್ನು ಆಧರಿಸಿ ಡಿ.8ರಂದು ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next