Advertisement

ಹಂಪನಕಟ್ಟೆಯಲ್ಲಿ ಕಾಣಿಸಿಕೊಂಡು ಜನರ ಗಲಿಬಿಲಿಗೆ ಕಾರಣವಾದ ಹೆಬ್ಬಾವು

03:13 PM Aug 18, 2020 | keerthan |

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿ ಸೋಮವಾರ ಹೆಬ್ಬಾವೊಂದು ಕಾಣಿಸಿಕೊಂಡು ಕೆಲ ಕಾಲ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.

Advertisement

ಜಿಎಚ್ಎಸ್ ರಸ್ತೆಯ ಹೋಟೆಲ್ ಶ್ರೀನಿವಾಸ ಬಳಿ ಹೆಬ್ಬಾವು ಕಾಣಿಸಿಕೊಂಡಿದ್ದು ಜನರು ಗಲಿಬಿಲಿಗೊಂಡಿದ್ದರು. ಅತ್ತಿಂದಿತ್ತ ಓಡಾಡುತ್ತಿದ್ದ ಹೆಬ್ಬಾವನ್ನು ತರಕಾರಿ ಇಡುವ ಬಾಕ್ಸ್ ನಲ್ಲಿ ಮುಚ್ಚಿ ಅದರೊಳಗಿದ್ದ ಹಾವನ್ನು ಪೈಪ್ ನೊಳಗೆ ಬರುವಂತೆ ಮಾಡಲಾಯಿತು.

ಪೈಪ್ ಮತ್ತೊಂದು ಬದಿಯಲ್ಲಿ ಗೋಣಿಚೀಲವಿರಿಸಿ ಹೆಬ್ಬಾವು ಗೋಣಿಚೀಲಕ್ಕೆ ಬೀಳುವಂತೆ ಮಾಡಲಾಯಿತು. ಬಳಿಕ ಹೆಬ್ಬಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next