Advertisement

Puttur: ಸ್ಕೂಟಿ-ಕಾರು ಅಪಘಾತ: ಗಾಯಾಳು ಸಾವು

07:57 PM Sep 22, 2024 | Team Udayavani |

ಪುತ್ತೂರು: ಕಾಣಿಯೂರು-ಮಂಜೇಶ್ವರ ಅಂತಾರಾಜ್ಯ ರಸ್ತೆಯ ಪುರುಷರಕಟ್ಟೆಯಲ್ಲಿ ಶನಿವಾರ ಸಂಜೆ ನಡೆದಿದ್ದ ಸ್ಕೂಟಿ-ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟಿ ಸವಾರ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.

Advertisement

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಪುರುಷರಕಟ್ಟೆಯಲ್ಲಿ ಹೋಳಿಗೆ ವ್ಯಾಪಾರ ಮಾಡುತ್ತಿದ್ದ ಬಂಟ್ವಾಳ ಪಂಜಿಕಲ್ಲು (ಪಂಜಳ) ನಿವಾಸಿ ಗಣೇಶ್‌ ಪ್ರಭು (53) ಮೃತರು. ಹಿಂದೆ ಪುರುಷರಕಟ್ಟೆಯ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಗಣೇಶ್‌ ಪ್ರಭು ಕಾಲು ನೋವಿನ ಕಾರಣಕ್ಕಾಗಿ ಕೆಲಸ ಬಿಟ್ಟು ಹೋಳಿಗೆ ವ್ಯಾಪಾರ ಆರಂಭಿಸಿದ್ದರು. ಪ್ರತಿ ದಿನ ಬಂಟ್ವಾಳದಿಂದ ಪುರುಷರಕಟ್ಟೆಗೆ ಬಂದು ಹೋಳಿಗೆ ಪಡೆದುಕೊಂಡು ಸ್ಕೂಟಿಯಲ್ಲಿ ತಾಲೂಕಿನ ವಿವಿಧ ಭಾಗಕ್ಕೆ ತೆರಳಿ ಮಾರಾಟ ಮಾಡುತ್ತಿದ್ದರು. ಶನಿವಾರ ರಾತ್ರಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಕಾರು ಚಾಲಕನ ನಿರ್ಲಕ್ಷ್ಯತನದಿಂದ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next