Advertisement

Puttur; ಎರಡು ವರ್ಷಗಳಿಂದ ನಾಪತ್ತೆ: ದೂರು ದಾಖಲು

09:50 PM Mar 01, 2024 | Team Udayavani |

ಪುತ್ತೂರು: ಎರಡು ವರ್ಷಗಳ ಹಿಂದೆ ಅಯೋಧ್ಯೆಗೆ ತೆರಳಿದ್ದ ಕೆಯ್ಯೂರು ಗ್ರಾಮದ ದೇರಾಜೆ ಮನೆಯ ಬಾಲಕೃಷ್ಣ ಶೆಟ್ಟಿ (66) ಅವರು ಇನ್ನೂ ವಾಪಸ್‌ ಬಂದಿಲ್ಲ. ಅವರ ಮಾಹಿತಿ ಸಿಕ್ಕಿದಲ್ಲಿ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Advertisement

ಬಾಲಕೃಷ್ಣ ಶೆಟ್ಟಿ 2022ರ ಫೆ. 3ರಂದು ಬೆಳಗ್ಗೆ 8 ಗಂಟೆಗೆ ಅಯೋಧ್ಯೆಗೆಂದು ತಿಳಿಸಿ ಮನೆಯಿಂದ ಹೋಗಿದ್ದರು. ರೈಲಿನಲ್ಲಿ ತೆರಳಿ ಅಯೋಧ್ಯೆಗೆ ತಲುಪಿದ ಬಳಿಕ ಅಳಿಯ ದಿನೇಶ್‌ ರೈಗೆ ಕರೆ ಮಾಡಿದ್ದರು. ಅನಂತರ ಅಯೋಧ್ಯೆಯಿಂದ 15 ದಿನಗಳವರೆಗೆ ತನ್ನ ಮೊಬೈಲ್‌ನಿಂದ ಪುತ್ರಿ ದೀಪಾರಿಗೆ ಕರೆ ಮಾಡಿಕೊಂಡಿದ್ದರು. ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಲಕೃಷ್ಣ ಶೆಟ್ಟಿ ಬಿಳಿ ಮೈಬಣ್ಣ ಹೊಂದಿದ್ದು, 152 ಸೆ.ಮೀ ಎತ್ತರ, ಕಪ್ಪು ಬಿಳಿ ಮಿಶ್ರಿತ ಕೂದಲು, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತುಳು ಮಾತನಾಡುತ್ತಾರೆ. ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next