Advertisement

‘ಮಾಚಿದೇವ ಕ್ರಾಂತಿಕಾರಿ ಹೋರಾಟಗಾರ’

06:41 AM Feb 02, 2019 | |

ಪುತ್ತೂರು: ಹನ್ನೆರಡನೆಯ ಶತ ಮಾನದಲ್ಲಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ಕ್ರಾಂತಿಕಾರಿ ಧೋರಣೆಯ ವ್ಯಕ್ತಿ ತ್ವದ ಮೂಲಕ ಹೋರಾಟ ಮಾಡಿದ ದಿಟ್ಟ ವಚನಕಾರ ಮಡಿವಾಳ ಮಾಚಿದೇವ ಎಂದು ಸವಣೂರು ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ ಅವರು ಹೇಳಿದರು.

Advertisement

ಪುತ್ತೂರು ತಾಲೂಕು ನಾಡಹಬ್ಬಗಳ ಆಚರಣ ಸಮಿತಿಯ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಅವರು ಸಂಸ್ಮರಣ ಉಪನ್ಯಾಸ ನೀಡಿದರು.

12ನೇ ಶತಮಾನದ ಪ್ರಮುಖ ಕಾಲಘಟ್ಟ ದಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಸಹಿತ ಸಾಮಾಜಿಕ, ಧಾರ್ಮಿಕ ಸಮಸ್ಯೆಗಳು ವ್ಯಾಪಕವಾಗಿ ದ್ದವು. ಪ್ರಗತಿ ಪರ ಧೋರಣೆಯ ಮೂಲಕ ಸಮಾಜದಲ್ಲಿ ಪರಿವರ್ತನೆಯ ಉದ್ದೇಶದೊಂದಿಗೆ ಬಸವಣ್ಣ ಅವರು ಮುನ್ನೆಲೆಗೆ ತಂದ ಅನುಭವ ಮಂಟಪ ಮನುಕುಲದ ಪ್ರಥಮ ಸಂಸತ್ತು ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ. ಅನುಭವ ಮಂಟಪದ ಪ್ರಮುಖ ಸದಸ್ಯನಾಗಿ ಮಡಿವಾಳ ಮಾಚಿದೇವ ನಡೆಸಿದ ಹೋರಾಟ ಸ್ಮರಣೀಯ ಎಂದರು.

ಪರಿವರ್ತನೆಯೇ ಮಹತ್ವ
ಮಡಿವಾಳ ಮಾಚಿದೇವ ಅವರು ವೃತ್ತಿಯನ್ನು ಪಾಲಿಸಿಕೊಂಡು ಶರಣರ ಬಟ್ಟೆಗಳನ್ನು ಶುಚಿ ಮಾಡುವುದಕ್ಕಿಂತ ವಚನ ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆಯಲ್ಲಿ ತೊಡಗಿಸಿಕೊಂಡಿದ್ದು ಅತ್ಯಂತ ಮಹತ್ವದ ವಿಚಾರ. ಸಾಮಾಜಿಕ ಸಮಸ್ಯೆಗಳನ್ನು ತಮ್ಮ 400ಕ್ಕೂ ಹೆಚ್ಚು ತೀಕ್ಷ್ಣ ವಚನ ಸಾಹಿತ್ಯದ ಮೂಲಕ ಹೋಗಲಾಡಿ ಸುವ ಪ್ರಯತ್ನ ನಡೆಸಿರುವುದು ಆ ಕಾಲಕ್ಕೆ ಮಾದರಿ. ಆದರೆ ಉಳಿದ ವಚನಕಾರರಂತೆ ಮಾಚಿದೇವರ ವಚನಗಳು ವಿಮರ್ಶೆಗೆ ಒಳಗಾಗದೇ ಇರುವುದು ಬೇಸರದ ವಿಚಾರ ಎಂದರು.

ವೈಚಾರಿಕ ಹೋರಾಟ
ವಚನ ಸಾಹಿತ್ಯವನ್ನು ಉಳಿಸುವಲ್ಲಿಯೂ ಅಗತ್ಯ ಸೇವೆ ಸಲ್ಲಿಸಿದವರು ಮಾಚಿದೇವ. ವಚನ ಸಾಹಿತ್ಯ ನಾಶಕ್ಕೆ ಹೊರಟವರ ವಿರುದ್ಧ ಯೋಧನಾಗಿ ಹೋರಾಟ ಮಾಡಿದವರು ಅವರು ಎಂದು ಹೇಳಿದ ಬಿ.ವಿ. ಸೂರ್ಯನಾರಾಯಣ, ತಾವು ಶಿವಶರಣರಾಗಿದ್ದು, ತಪ್ಪಿ ನಡೆವ ಶಿವಶರಣರ ವಿರುದ್ಧ ವೈಚಾರಿಕ ಟೀಕೆಗಳನ್ನು ಮಾಡಿದವರು. ಸ್ವತಃ ಗುರು ಬಸವಣ್ಣರು ತಪ್ಪು ಮಾಡಿದಾಗಲೂ ವಿರೋಧಿಸಿದವರು. ಇದು ಪ್ರಜಾಪ್ರಭುತ್ವ ಮಾದರಿಯಲ್ಲಿ ಧರ್ಮ ಕಟ್ಟುವ ಕಾರ್ಯ ಆಗಲೂ ನಡೆಯುತ್ತಿತ್ತು ಎನ್ನುವುದಕ್ಕೆ ಉದಾಹರಣೆ ಎಂದು ಅಭಿಪ್ರಾಯಪಟ್ಟರು.

Advertisement

ತಾ.ಪಂ. ಇಒ ಜಗದೀಶ್‌ ಎಸ್‌. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್‌ ಸದಸ್ಯೆ ಮೀನಾಕ್ಷಿ ಮಂಜುನಾಥ, ಮಡಿವಾಳ ಸಮುದಾ ಯದ ಪ್ರಮುಖರು, ತಾಲೂಕು ಕಚೇರಿ ಸಿಬಂದಿ ವರ್ಗದವರು ಪಾಲ್ಗೊಂಡರು.

ಉಪ ತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ಸ್ವಾಗತಿಸಿ, ತಾಲೂಕು ಕಚೇರಿ ಸಿಬಂದಿ ದಯಾನಂದ ಕಾರ್ಯ ಕ್ರಮ ನಿರ್ವಹಿಸಿದರು.

ಸರಕಾರಕ್ಕೆ ಅಭಿನಂದನೆ
ಮಡಿವಾಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಮಾತನಾಡಿ, ಕಳೆದ ವರ್ಷ ದಿಂದ ಸರಕಾರ ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ಆಚರಿಸುವ ಮೂಲಕ ಅವರ ಬದುಕಿಗೆ ನ್ಯಾಯ ನೀಡಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next