Advertisement

ಪುತ್ತೂರು: ಅಗಲಿದ ಯಜಮಾನನಿಗೆ ಅರ್ಥಪೂರ್ಣ ಶೃದ್ಧಾಂಜಲಿ ನೀಡಿದ ಕೋಣಗಳು

06:03 PM Apr 13, 2020 | |

ಪುತ್ತೂರು: ಶನಿವಾರ ಆರಂಭವಾದ ಪುತ್ತೂರಿನ  26 ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ  ಭಾನುವಾರ ಸಂಜೆಯ ವೇಳೆಗೆ ವಿಜೃಂಭಣೆಯಿಂದ ಸಂಪನ್ನವಾಯಿತು. ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂಡಬಿದ್ರೆ ಕರಿಂಜೆ ವಿನು ವಿಶ್ವನಾಥ ಶೆಟ್ಟರ ಕೋಣಗಳು ಪ್ರಥಮ ಸ್ಥಾನ ಪಡೆದು ಇತ್ತೀಚಿಗೆ ಅಗಲಿದ ಪ್ರೀತಿಯ ಯಜಮಾನನಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ನೀಡಿದವು.

Advertisement

ಕಂಬಳ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದ ವಿನು ವಿಶ್ವನಾಥ್ ಶೆಟ್ಟರು, ಇತ್ತೀಚಿಗೆ ಹೊಕ್ಕಾಡಿಗೋಳಿ ಕಂಬಳದಿಂದ ಹಿಂದೆ ಬರುವ ಸಮಯದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದರು. ಹೊಕ್ಕಾಡಿಗೋಳಿ ಕಂಬಳದಲ್ಲಿ ವಿನು ವಿಶ್ವನಾಥ್ ಶೆಟ್ಟರ ಕೋಣಗಳು ಪ್ರಥಮ ಸ್ಥಾನ ಪಡೆದಿದ್ದವು. ಆದರೆ ಆ ಸಂತೋಷ ಹೆಚ್ಚು ಸಮಯ ಉಳಿದಿರಲಿಲ್ಲ.  ನಂತರದ ಎರಡು ಕಂಬಳದಲ್ಲಿ ಈ ಕೋಣಗಳು ಭಾಗವಹಿಸಿರಲಿಲ್ಲ.


ಈಗ ಪುತ್ತೂರು ಕಂಬಳದಲ್ಲಿ ವಿನು ವಿಶ್ವನಾಥ ಶೆಟ್ರ ಕೋಣಗಳು ಪ್ರಥಮ ಸ್ಥಾನ ಪಡೆದು ಸಾಕಿ ಸಲಹಿದ್ದ ಪ್ರೀತಿಯ ಯಜಮಾನನ ಹೆಸರನ್ನು ಮತ್ತೆ ಮೊಳಗುವಂತೆ ಮಾಡಿವೆ.

ಪುತ್ತೂರು ಕಂಬಳ  ಕೂಟದಲ್ಲಿ ಒಟ್ಟು 133 ಜೊತೆ ಕೋಣಗಳು  ಭಾಗವಹಿಸಿದ್ದವು.
ಕನೆಹಲಗೆ: 3 ಜೊತೆ, ಅಡ್ಡಹಲಗೆ: 4 ಜೊತೆ, ಹಗ್ಗ ಹಿರಿಯ: 18 ಜೊತೆ, ನೇಗಿಲು ಹಿರಿಯ: 22 ಜೊತೆ, ಹಗ್ಗ ಕಿರಿಯ: 12 ಜೊತೆ, ನೇಗಿಲು ಕಿರಿಯ: 72 ಜೊತೆ

ಫಲಿತಾಂಶ 
ಕನೆಹಲಗೆ: ರಾಕೇಶ್ ಮಲ್ಲಿ
ಓಡಿಸಿದವರು: ನಾರಾವಿ ಯುವರಾಜ್ ಜೈನ್
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

Advertisement

ವಾಮಂಜೂರು ತಿರುವೈಲು ಗುತ್ತು ನವೀನ್ಚಂದ್ರ ಆಳ್ವ
ಓಡಿಸಿದವರು: ಬೈಂದೂರು ಬಾಸ್ಕರ ದೇವಾಡಿಗ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಹಗ್ಗ ಹಿರಿಯ:
ಪ್ರಥಮ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ “B”
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ಹಗ್ಗ ಕಿರಿಯ
ಪ್ರಥಮ: ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
ದ್ವಿತೀಯ: ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗ “A”
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ 
ಪ್ರಥಮ: ಬೋಳದ ಗುತ್ತು ಜಗದೀಶ್ ಶೆಟ್ಟಿ “A”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.M.ಶೆಟ್ಟಿ
ದ್ವಿತೀಯ: ಬೋಳದ ಗುತ್ತು ಜಗದೀಶ್ ಶೆಟ್ಟಿ “B”
ಓಡಿಸಿದವರು: ಮರೋಡಿ ಶ್ರೀಧರ್

ನೇಗಿಲು ಕಿರಿಯ
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ
ಓಡಿಸಿದವರು: ನತೀಶ್ ಬಾರಾಡಿ
ದ್ವಿತೀಯ: ಬಾರ್ಯ ಬಳ್ಳಿ ದಡ್ಯ ಗುತ್ಯಂಡ ಪರಮೇಶ್ವರ ದೊಂಬಯ್ಯ ಗೌಡ
ಓಡಿಸಿದವರು: ಮರೋಡಿ ಶ್ರೀಧರ್

ಅಡ್ಡಹಲಗೆ
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕ್
ದ್ವಿತೀಯ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಓಡಿಸಿದವರು: ನಾರಾವಿ ಯುವರಾಜ್ ಜೈನ್

Advertisement

Udayavani is now on Telegram. Click here to join our channel and stay updated with the latest news.

Next