Advertisement

ಪುತ್ತೂರು : ಜಾತಿ ನಿಂದನೆ, ಹಲ್ಲೆ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

11:53 PM Jun 26, 2022 | Team Udayavani |

ಪುತ್ತೂರು: ಏಲ್ಮುಡಿ ನಿವಾಸಿ ರಿತೇಶ್‌ ಪಾಯಸ್‌ ವಿರುದ್ಧದ ಜಾತಿ ನಿಂದನೆ ಮತ್ತು ಹಲ್ಲೆ ಆರೋಪದಡಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ.

Advertisement

ಕಟ್ಟಡದ ನೆಲಮಹಡಿಯಲ್ಲಿ ನಿಂದಿಸಿದರೆ ಅದು ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ಅನ್ವಯಿಸುವುದಿಲ್ಲ ಎಂದು ರಾಜ್ಯ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗೆ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

ಉದ್ಯಮಿ ರಿತೇಶ್‌ ಪಾಯಸ್‌ ಮತ್ತು ಜಯ ಕುಮಾರ್‌ ನಾಯರ್‌ ಅವರ ಮಧ್ಯೆ ಸಿವಿಲ್‌ ವ್ಯಾಜ್ಯ ನ್ಯಾಯಾಲಯದಲ್ಲಿ ತನಿಖೆಯಲ್ಲಿತ್ತು. ಜಯಕುಮಾರ್‌ ನಾಯರ್‌ ವಿರುದ್ಧ ರಿತೇಶ್‌ ಪಾಯಸ್‌ ಪ್ರತಿಬಂಧಕಾಜ್ಞೆ ಪಡೆದಿದ್ದರು. ಜಯ ಕುಮಾರ್‌ ನಾಯರ್‌ ಅವರ ಕಟ್ಟಡದ ಕಾರ್ಮಿಕರು ನೀಡಿದ ದೂರಿನಂತೆ ರಿತೇಶ್‌ ಪಾಯಸ್‌ ವಿರುದ್ದ ಎಫ್‌.ಐ.ಆರ್‌. ದಾಖಲಾಗಿತ್ತು.

ರಿತೇಶ್‌ ಪಾಯಸ್‌ ನ್ಯಾಯವಾದಿ ಶಂಭು ಭಟ್‌ ಅವರ ಮೂಲಕ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ಕೋರಿ ಅರ್ಜಿ ಸಲ್ಲಿಸಿ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೋಲೀಸರು ರಿತೇಶ್‌ ಪಾಯಸ್‌ ಅವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ರಿತೇಶ್‌ ಪಾಯಸ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next