Advertisement

ಪುತ್ತೂರು: ಗುಂಡಿನ ದಾಳಿ ಪ್ರಕರಣ ಆರೋಪಿಗಳ ಬಂಧನ

11:54 AM Nov 30, 2019 | Team Udayavani |

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿ ಕಬಕ ಕಲಂದಡ್ಕ ಎಂಬಲ್ಲಿ ನಿವಾಸಿ ಅಬ್ದುಲ್ ಖಾದರ್ ( 35 ವರ್ಷ) ಎಂಬವರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Advertisement

ಮಾನ್ಯ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರು ಆರೋಪಿಯ ಬಗ್ಗೆ  ನೀಡಿದ  ಖಚಿತ ಮಾಹಿತಿಯ ಮೇರೆಗೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿಟ್ಲ ಕೇಪು ಗ್ರಾಮದ ನಿವಾಸಿ  ಹನೀಫ್ ಜೋಗಿ (39 ವರ್ಷ ) ಎಂಬಾತನನ್ನು  ಗುಂಡ್ಯ ಚೆಕ್ ಪೋಸ್ಟ್ ಬಳಿ ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ. ಮಾನ್ಯ ನ್ಯಾಯಾಲಯವು. ಹಾಗೂ  ಈ ಪ್ರಕರಣದ ಪ್ರಮುಖ ಆರೋಪಿ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ  ಹಸನ್ ಸಾಧೀಕ್,  ಬ್ಲೇಡ್ ಸಾಧೀಕ್ ಎಂಬಾತನನ್ನು ವಿಶೇಷ ತಂಡ ಮತ್ತು ಡಿಸಿಐಬಿ ಸಿಬ್ಬಂದಿಗಳು ಮಡಿಕೇರಿಯ ಗಾಳಿಬೀಡು ಎಂಬಲ್ಲಿ ಬಂಧಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next