Advertisement

ಪುಟ್ಟಣ್ಣಯ್ಯ ಅಗಲುವಿಕೆಯಿಂದ ನೊಂದು ಅಭಿಮಾನಿ ಆತ್ಮಹತ್ಯೆ 

08:14 AM Feb 22, 2018 | Team Udayavani |

ಬೆಂಗಳೂರು: ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ರೈತಮುಖಂಡ ಕೆ.ಎಸ್‌.ಪುಟ್ಟಣ್ಣಯ್ಯನವ ಅಗಲುವಿಕೆಯಿಂದ ತೀವ್ರವಾಗಿ ಮನನೊಂದು ಯುವ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. 

Advertisement

ಸಿಡಿಎಸ್‌ ನಾಲೆ ಬಳಿ 25 ರ ಹರೆಯದ ರೈತ ಚಂದನ್‌ (25)ಎಂಬಾತ  ಪುಟ್ಟಣ್ಣಯ್ಯ ಅವರ ಚಿತ್ರವಿರುವ ಟೀ ಶರ್ಟ್‌ ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. 

ಇಂದು   ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಬೆಳಿಗ್ಗೆ 10.30ಕ್ಕೆ  ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಹೋರಾಟ ಗೀತೆಗಳೊಂದಿಗೆ ನಡೆಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ತೀರ್ಮಾನಿಸಿದೆ.

 ಅಂತ್ಯ ಸಂಸ್ಕಾರಕ್ಕೆ ರೈತ ಸಂಘದ ಕಾರ್ಯಕರ್ತರು ರಾಜ್ಯದ ಎಲ್ಲ ಜಿಲ್ಲೆಗಳಿಂದ ಬೊಗಸೆ
ಮಣ್ಣನ್ನು ಹಿಡಿದು ಬರಲಿದ್ದಾರೆ. ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌, ಉತ್ತರ ಭಾರತದ ರೈತ ನಾಯಕ ರಾಕೇಶ್‌ ಟಿಕಾಯಿತ್‌ ಭಾಗವಹಿಸಲಿದ್ದಾರೆ ಎಂದು ರಾಜ್ಯ ಸಮಿತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next