Advertisement

Puri; ರತ್ನಭಂಡಾರದ ಆಭರಣಗಳ ಸ್ಥಳಾಂತರ ಪ್ರಕ್ರಿಯೆ ಪೂರ್ಣ

01:14 AM Jul 19, 2024 | Team Udayavani |

ಪುರಿ: ಒಡಿಶಾದ ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರವನ್ನು ಗುರುವಾರ ಮತ್ತೆ ತೆರೆಯಲಾಗಿದ್ದು, ಒಳ ಕೊಠಡಿಯಲ್ಲಿರುವ ಅಮೂಲ್ಯ ವಸ್ತುಗಳನ್ನು ತಾತ್ಕಾಲಿಕ ದಾಸ್ತಾನು ಕೋಣೆಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಡೆಸಲಾಗಿದೆ. ಇವುಗಳ ಸ್ಥಳಾಂತರದ ಉದ್ದೇಶದಿಂದಲೇ ವಾರದಲ್ಲಿ 2ನೇ ಬಾರಿಗೆ ರತ್ನಭಂಡಾರದ ಬಾಗಿಲನ್ನು ತೆರೆಯಲಾಗಿತ್ತು. ಗುರುವಾರ 7 ಗಂಟೆಗಳು ಸ್ಥಳಾಂತರ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರದ ಮತ್ತು ಸ್ಟೀಲ್‌ನ ಕಪಾಟುಗಳು ಸೇರಿ ಒಟ್ಟು 7 ಕಂಟೇನರ್‌ಗಳಲ್ಲಿ ಅಮೂಲ್ಯ ವಸ್ತುಗಳನ್ನು ತುಂಬಿಸಿ, ತಾತ್ಕಾಲಿಕ ಕೋಣೆ ಗೆ ಶಿಫ್ಟ್ ಮಾಡಲಾಯಿತು. ಬಳಿಕ ಒಳಾಂಗಣ ಕೋಣೆ ಮತ್ತು ತಾತ್ಕಾಲಿಕ ಭದ್ರತಾ ಕೊಠಡಿಯನ್ನು ಸೀಲ್‌ ಮಾಡಿ ಕೀಲಿಕೈಯನ್ನು ಪುರಿ ಜಿಲ್ಲಾಧಿಕಾರಿಗೆೆ ಹಸ್ತಾಂತರಿಸಲಾಯಿತು ಎಂದು ದೇಗುಲ ಆಡಳಿತ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next