Advertisement

ಪಂಜಾಬ್‌ ಅಧಿಕಾರಿಗಳ ದಿಲ್ಲಿ ಪ್ರವಾಸ: ಮನ್‌ ಸ್ಪಷ್ಟನೆ

09:35 PM Apr 14, 2022 | Suhan S |

ಚಂಡೀಗಡ: “ಅಗತ್ಯ ಬಿದ್ದರೆ ನಮ್ಮ ಸರ್ಕಾರದ ಅಧಿಕಾರಿಗಳನ್ನು ಇಸ್ರೇಲ್‌ಗ‌ೂ ಕಳುಹಿಸುತ್ತೇವೆ’ ಹೀಗೆಂದು ಗುಡುಗಿದ್ದು ಪಂಜಾಬ್‌ ಸಿಎಂ ಭಗವಂತ ಸಿಂಗ್‌ ಮಾನ್‌.

Advertisement

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪಂಜಾಬ್‌ ಸಿಎಂ ಅನುಪಸ್ಥಿತಿಯಲ್ಲಿ ನವದೆಹಲಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಕ್ಕೆ ಪ್ರತಿಪಕ್ಷಗಳು ವ್ಯಕ್ತಪಡಿಸಿದ ಟೀಕೆಗೆ ಪ್ರತ್ಯುತ್ತರವಾಗಿ ಮಾನ್‌ ಈ ಮಾತುಗಳನ್ನಾಡಿದ್ದಾರೆ.

“ದೆಹಲಿ ಸರ್ಕಾರದ ಶಿಕ್ಷಣ, ವಿದ್ಯುತ್‌, ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದೆ. ಹೀಗಾಗಿ, ಅಲ್ಲಿನ ಉತ್ತಮ ಅಂಶಗಳನ್ನು ಅಧ್ಯಯನ ನಡೆಸಲು ಅಧಿಕಾರಿಗಳನ್ನು ನವದೆಹಲಿಗೆ ಕಳುಹಿಸಲಾಗಿತ್ತು. ಉತ್ತಮ ವಿಚಾರಗಳಿರುವ ಕಡೆಗೆ ಅಧಿಕಾರಿಗಳನ್ನು ಕಳಿಸಿ ಅವರಿಂದ ಆ ಬಗ್ಗೆ ಅರಿವು ತರಲು ಪ್ರಯತ್ನಿಸುವುದರಲ್ಲಿ ಯಾವ ತಪ್ಪಿದೆ ಎಂದು ಅವರು ಕೇಳಿದ್ದಾರೆ.

ಅಗತ್ಯ ಬಿದ್ದರೆ ತರಬೇತಿಗಾಗಿ ನಮ್ಮ ಅಧಿಕಾರಿಗಳನ್ನು ಇಸ್ರೇಲ್‌ಗೆ ಕೂಡ ಕಳುಹಿಸುತ್ತೇವೆ. ಗುಜರಾತ್‌, ಆಂಧ್ರಪ್ರದೇಶ, ತಮಿಳುನಾಡಿಗೆ ಕೂಡ ಕಳುಹಿಸುತ್ತೇವೆ. ಅದಕ್ಕೆ ಇನ್ನೊಬ್ಬರೇಕೆ ಆಕ್ಷೇಪ ಮಾಡಬೇಕು’ ಎಂದು ಮುಖ್ಯಮಂತ್ರಿ ಭಗವಂತ ಸಿಂಗ್‌ ಮಾನ್‌ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next