Advertisement

ಪಿ.ಎಂ.ಸಿ. ಬ್ಯಾಂಕಿನ ಇನ್ನೋರ್ವ ಖಾತೆದಾರ ಹೃದಯಾಘಾತಕ್ಕೆ ಬಲಿ

09:20 AM Oct 16, 2019 | Hari Prasad |

ಮುಂಬಯಿ: ಹಣಕಾಸು ಅವ್ಯವಹಾರ ಹಗರಣದಿಂದ ಸೊರಗಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿರುವ ಮತ್ತು ಠೇವಣಿ ಇರಿಸಿರುವ ಲಕ್ಷಾಂತರ ಗ್ರಾಹಕರು ಇದೀಗ ಅಂತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಬ್ಯಾಂಕಿನ ವ್ಯವಹಾರಗಳ ಮೇಲೆ ಮತ್ತು ನಗದು ಹಿಂಪಡೆದುಕೊಳ್ಳುವದರ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದ ಬಳಿಕ ಈ ಬ್ಯಾಂಕಿನಲ್ಲಿ ಹಣ ಇರಿಸಿರುವವರು ತಮ್ಮ ಹಣದ ಭದ್ರತೆಯ ಕುರಿತು ಆತಂಕಗೊಂಡಿದ್ದಾರೆ.

Advertisement

ಪಿಎಂಸಿ ಬ್ಯಾಂಕಿನಲ್ಲಿ 90 ಲಕ್ಷ ರೂಪಾಯಿಗಳಷ್ಟು ಠೇವಣಿ ಇರಿಸಿದ್ದ ಸಂಜಯ್ ಗುಲ್ಹಾಟಿ ಎಂಬವರು ಸೋಮವಾರದಂದು ಹೃದಯಾಘಾತದಿಂದ ಮೃತಪಟ್ಟ ಬೆನ್ನಲ್ಲೇ ಇಂದು ಮುಲುಂಡ್ ನಿವಾಸಿ ಫಟ್ಟೋಮಲ್ ಪಂಜಾಬಿ ಎನ್ನುವ ಇನ್ನೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪಂಜಾಬಿ ಅವರು ಈ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.

ಮುಂಬಯಿಯ ಮುಲುಂಡ್ ಭಾಗದ ಕನಿಷ್ಟ 95 ಪ್ರತಿಶತ ಜನರು ಪಿಎಂಸಿ ಬ್ಯಾಂಕಿನ ಗ್ರಾಹಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next