Advertisement

ಪುಣೆ ಶ್ರೀ ಗುರುದೇವ ಸೇವಾ ಬಳಗ: ಜ್ಯೋತಿರ್ಲಿಂಗ ದರ್ಶನ

04:21 PM Sep 18, 2018 | |

ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀà ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ  ಶ್ರಾವಣ ಮಾಸದಲ್ಲಿ  ಪ್ರತಿ  ವರ್ಷದಂತೆ ನಡೆಯುವ ಪುಣ್ಯ ಜ್ಯೋತಿರ್ಲಿಂಗ ದರ್ಶನದ ತೀರ್ಥಯಾತ್ರೆಯು ಈ ಬಾರಿ ಅಂಧ್ರ ಪ್ರದೇಶ ತೆಲಂಗಾಣದ  ಶ್ರೀಶೈಲಂ ಮಲ್ಲಿಕಾರ್ಜುನ  ಜ್ಯೋತಿರ್ಲಿಂಗ ಕ್ಷೇತ್ರದಲ್ಲಿ ನಡೆಯಿತು.

Advertisement

ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಶುಭಾಶೀರ್ವಾದದೊಂದಿಗೆ,  ಪುಣೆ ಶ್ರೀ ಗುರುದೇವ ಸೇವಾ ಬಳಗದ  ಅಧ್ಯಕ್ಷ  ಸದಾನಂದ ಕೆ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಸುಮಾರು 44 ಜನ ಯಾತ್ರಾರ್ಥಿಗಳು, ಈ ಬಾರಿ ಭಾರತದ ಪವಿತ್ರವಾದ 12 ಜ್ಯೋತಿರ್ಲಿಂಗಗಳ ಪೈಕಿ ತೆಲಂಗಾಣದ ರಾಜಧಾನಿ  ಹೈದರಾಬಾದ್‌ನಿಂದ  280 ಕಿ. ಮೀ. ದೂರವಿರುವ ಪವಿತ್ರ ಜ್ಯೋತಿರ್ಲಿಂಗವಾದ ಶ್ರೀ ಶೈಲಂ ಮಲ್ಲಿಕಾರ್ಜುನಾಥೇಶ್ವರ ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಿ  ಪುನೀತರಾದರು.

ಈ ಮದ್ಯೆ  ಪಾತಾಳಗಂಗಾ ವಿನಾಯಕ ದೇವಸ್ಥಾನ  ಬಿರ್ಲಾ  ವೆಂಕಟರಮಣ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳನ್ನು ಸಂದರ್ಶನ ಮಾಡಿ ಪೂಜೆ ಸಲ್ಲಿಸಿದರು. ಅಲ್ಲದೆ ಹೈದರಾಬಾದ್‌ನಲ್ಲಿಯ ರಾಮೋಜಿ ಫಿಲಂ ಸಿಟಿ  ವೀಕ್ಷಣೆಯನ್ನು ಕೂಡಾ ಮಾಡಲಾಯಿತು. ಸದಾನಂದ ಶೆಟ್ಟಿ  ಅವರು ಪುಣೆ  ಶ್ರೀ  ಗುರುದೇವಾ  ಸೇವಾ ಬಳಗದ  ಅಧ್ಯಕ್ಷರಾದ ಅನಂತರ ಅವರ ಮಾರ್ಗದರ್ಶನದಲ್ಲಿ ಭಾರತದ 12 ಜ್ಯೋತಿರ್ಲಿಂಗ ದರ್ಶನದ ಯಾತ್ರೆಯನ್ನು   ಕೈಗೊಳ್ಳುವ  ಸಂಕಲ್ಪವನ್ನು ಮಾಡಲಾಯಿತು. ಪ್ರತಿವರ್ಷವೂ ಶ್ರಾವಣ ತಿಂಗಳ ಸೋಮವಾರ ಬರುವಂತೆ ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಈವರೆಗೆ 9 ಜ್ಯೋತಿರ್ಲಿಂಗ ದರ್ಶನವನ್ನು ಮಾಡಲಾಗಿದೆ. ಈ    ಯಾತ್ರೆಯನ್ನು  ಬಳಗದ ಪ್ರಮುಖರಾದ ಉಷಾ ಕುಮಾರ್‌ ಶೆಟ್ಟಿ ಅವರು ಆಯೋಜಿಸುವಲ್ಲಿ ಹಾಗೂ ಬಳಗದ ಪ್ರಮುಖರೆಲ್ಲರೂ ಸರ್ವ ರೀತಿಯಿಂದಲೂ ಸಹಕಾರ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ದಂಪತಿಗಳು ಮತ್ತು ಮಹಿಳೆಯರು ಈ ಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷತೆಯಾಗಿತ್ತು.           

ಚಿತ್ರ-ವರದಿ : ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next