Advertisement

Pune ಅಕ್ರಮ ಸಂಬಂಧ ಶಂಕೆ; ಅತ್ತಿಗೆ ಮತ್ತು ಮಕ್ಕಳಿಬ್ಬರನ್ನು ಸುಟ್ಟು ಹಾಕಿದ ವ್ಯಕ್ತಿ

04:13 PM Apr 06, 2023 | Team Udayavani |

ಪುಣೆ: ನಗರದ ಕೊಂಡ್ವಾ ಪ್ರದೇಶದಲ್ಲಿ ವಿವಾಹೇತರ ಸಂಬಂಧದ ಶಂಕಿಸಿ ವ್ಯಕ್ತಿಯೊಬ್ಬ ತನ್ನ ಅತ್ತಿಗೆ ಮತ್ತು ಆಕೆಯ ಇಬ್ಬರು ಅಪ್ರಾಪ್ತ ವಯಸ್ಕ ಮಕ್ಕಳನ್ನು ಕೊಂದು, ನಂತರ ಶವಗಳನ್ನು  ಮನೆಯಲ್ಲಿ ಸುಟ್ಟು ಹಾಕಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

Advertisement

ಆರೋಪಿ ವೈಭವ್ ವಾಘಮಾರೆ ತನ್ನ ಅತ್ತಿಗೆ ಆಮ್ರಪಾಲಿ ವಾಘಮಾರೆ ಅವರೊಂದಿಗೆ ಇತರ ಪುರುಷರೊಂದಿಗೆ ಅಕ್ರಮ ಸಂಬಂಧಗಳ ಬಗ್ಗೆ ವಾದಿಸಿದಾಗ ಈ ಬೆಚ್ಚಿ ಬೀಳುವ, ಕಳವಳಕಾರಿ ಘಟನೆ ಬುಧವಾರ ಸಂಭವಿಸಿದೆ.

ಕ್ರೋಧಗೊಂಡ ವೈಭವ್ ವಾಘಮಾರೆ ಆಮ್ರಪಾಲಿಯನ್ನು ಹಿಡಿದು ಕತ್ತು ಹಿಸುಕಿ ಹತ್ಯೆಗೈದಿದ್ದು, ನಂತರ ಆಕೆಯ ಐದು ವರ್ಷದ ಮಗ ಮತ್ತು ನಾಲ್ಕು ವರ್ಷದ ಮಗಳನ್ನು ಕತ್ತು ಹಿಸುಕಿದ್ದಾನೆ ಎಂದು ಪ್ರಾಥಮಿಕ ತನಿಖೆ ಪ್ರಕಾರ ಹೇಳಲಾಗಿದೆ. ಅವರು ಕುಸಿದು ಬೀಳುತ್ತಿದ್ದಂತೆಯೇ ಪೆಟ್ರೋಲ್  ತಂದು ಅವರ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರು ಬೊಬ್ಬೆಯನ್ನು ಕೇಳಿ ಕೊಂಡ್ವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು, ಅವರು ತತ್ ಕ್ಷಣ ಸ್ಥಳಕ್ಕೆ  ಧಾವಿಸಿದರಾದರು.

ಗುರುವಾರ ಮುಂಜಾನೆ ಆರೋಪಿ ವೈಭವ್‌ನನ್ನು ಬಂಧಿಸಲಾಗಿದೆ. ಡಿಸಿಪಿ ಮತ್ತು ಇತರ ಉನ್ನತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೃತ ಮಹಿಳೆಯ ಪತಿ ಹಾಗೂ ಕುಟುಂಬದ ಸದಸ್ಯರ ವಿವರ ಸಂಗ್ರಹಿಸಲಾಗುತ್ತಿದೆ. ಅಧಿಕಾರಿಗಳ ಪ್ರಕಾರ ಆರೋಪಿಯನ್ನು ದಿನದ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಹನುಮ ಜಯಂತಿಯ ಮುನ್ನಾ ದಿನ ನಡೆದ ಈ ಘಟನೆ ಕೊಂಡವಾಡ ಪ್ರದೇಶದಲ್ಲಿ ಭಯಾನಕತೆಯನ್ನು ತಂದಿದ್ದು, ಇಡೀ ಕೊಂಡ್ವಾ ನಿವಾಸಿಗಳು ಇಂದು ದೇವಾಲಯಗಳಲ್ಲಿ ಈ ಬಗ್ಗೆ ಗುಸುಗುಸು ಮಾತನಾಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next