Advertisement

ಪುಣೆ ಬಿಟ್ಟು ಮುಂದೆ ಬಂದಿದ್ದೇವೆ,ಇದು ಮತ್ತೂಂದು ಪಂದ್ಯ: ಸ್ಮಿತ್‌

03:50 AM Mar 04, 2017 | Team Udayavani |

ಬೆಂಗಳೂರು: ಪುಣೆಯ ಆರಂಭಿಕ ಟೆಸ್ಟ್‌ನಲ್ಲಿ ಸಾಧಿಸಿದ ದೊಡ್ಡ ಗೆಲುವು ಈಗ ಇತಿಹಾಸ. ನಾವೀಗ ಪುಣೆ ಬಿಟ್ಟು ಮುಂದೆ ಬಂದಿದ್ದೇವೆ. ನಾಳೆಯಿಂದ ಹೊಸ ಪಂದ್ಯದ ಸರದಿ ಎಂಬುದಾಗಿ ವಿಜೇತ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

“ಕಳೆದ ವಾರದ ನಮ್ಮ ಪ್ರದರ್ಶನದಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಅಲ್ಲಿನ ಪರಿಸ್ಥಿತಿ ಬಹಳ ಕಠಿನವಿತ್ತು. ಆದರೆ ಹುಡುಗರು ಪರಿಸ್ಥಿತಿಗೆ ಹೊಂದಿಕೊಂಡು ಆಡಿದ ರೀತಿ ಪ್ರಶಂಸನೀಯ. ಶನಿವಾರದಿಂದ ನಾವು ಆಡುವುದು ಹೊಸ ಪಂದ್ಯ. ನಾವಿಲ್ಲಿ ಎಲ್ಲವನ್ನೂ ಹೊಸತಾಗಿ ಆರಂಭ ಮಾಡಬೇಕಿದೆ. ಸ್ಟಾರ್ಟ್‌ ಫ್ರಂ ಬಾಲ್‌ ಒನ್‌ ಅಂತಾರಲ್ಲ, ಹಾಗೆ…’ ಎಂದು ಸ್ಮಿತ್‌ ಹೇಳಿದರು.

“ಅನುಮಾನವೇ ಇಲ್ಲ, ಸೋತಿರುವ ಭಾರತ ದೊಡ್ಡ ಮಟ್ಟದಲ್ಲೇ ತಿರುಗಿ ಬೀಳಲಿದೆ. ತವರಿನಲ್ಲಿ ಅವರು ಉತ್ತಮ ಪ್ರದರ್ಶನ ನೀಡಬಲ್ಲರು…’ ಎಂಬುದು ಆಸೀಸ್‌ ಕಪ್ತಾನನ ಅನಿಸಿಕೆ.

“ಬೆಂಗಳೂರು ಪಿಚ್‌ ಪುಣೆಗಿಂತ ಭಿನ್ನವಾಗಿದೆ. ಪುಣೆ ಟ್ರ್ಯಾಕ್‌ ತ್ಯಂತ ಕಠಿನವಾಗಿತ್ತು. ಇಂಥ ಪರಿಸ್ಥಿತಿಯಲ್ಲೂ ಆಡಬಲ್ಲೆವು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಸುದೀರ್ಘಾವಧಿಯ ಬ್ಯಾಟಿಂಗ್‌ ನಡೆಸುವುದೇ ನಮ್ಮ ಗುರಿ. ಇಲ್ಲಿ ಪ್ರತಿ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ನಿರ್ಣಾಯಕ. ಪ್ರಥಮ ಸರದಿಯ ರನ್ನುಗಳು ಬಹಳ ಮುಖ್ಯ. ಪುಣೆಯಲ್ಲಿ 250 ರನ್ನೇ ದೊಡ್ಡ ಮೊತ್ತ ಎಂಬುದಾಗಿ ನಿರ್ಧರಿಸಿದ್ದೆವು. ಇಲ್ಲಿ ಅದಕ್ಕಿಂತ ಹೆಚ್ಚು ರನ್‌ ಪೇರಿಸಬೇಕು…’ ಎಂದು ಸ್ಮಿತ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next