Advertisement

ಪಂಪ್‌ ವೆಲ್‌ ಲಾಡ್ಜ್ ನಲ್ಲಿ ಕೊಲೆ : ಇನ್ನೋರ್ವ ಆರೋಪಿ ಬಂಧನ

02:52 PM Oct 18, 2021 | Team Udayavani |

ಮಂಗಳೂರು: ಪಂಪ್‌ ವೆಲ್‌ನ ಲಾಡ್ಜ್ ಒಂದರಲ್ಲಿ ಶನಿವಾರ ಮುಂಜಾನೆ ನಡೆದ ಪಚ್ಚನಾಡಿಯ ಧನುಷ್‌ ಕೊಲೆ ಪ್ರಕರಣದ ಆರೋಪಿಗಳಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೇರಿದೆ.

Advertisement

ಧನುಷ್‌ ಸಹಿತ ಒಟ್ಟು ಆರು ಮಂದಿ ಲಾಡ್ಜ್ನಲ್ಲಿ ಉಳಿದುಕೊಂಡು ಪಾರ್ಟಿ ಮಾಡಿದ್ದು, ತಡರಾತ್ರಿ ಅವರ ನಡುವೆ ಕಲಹ ಉಂಟಾಗಿ ಧನುಷ್‌ಗೆ ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಶನಿವಾರ, ರವಿವಾರ ಮತ್ತೋರ್ವನನ್ನು ವಶಕ್ಕೆ ಪಡೆದಿದ್ದರು.

ತಮ್ಮ ಮನೆಯವರ ಬಗ್ಗೆ ಯಾವಾಗಲೂ ತುಚ್ಛವಾಗಿ ಮಾತನಾಡುತ್ತಿದ್ದ ಎಂದು ಬುದ್ದಿ ಹೇಳುವುದಕ್ಕಾಗಿ ಧನುಷ್ ನನ್ನು ಲಾಡ್ಜ್ ಗೆ ಕರೆದಿದ್ದರು. ರಾಜಿ ಪಂಚಾಯತಿಕೆ ಮಾಡಲು ಮುಂದಾಗಿದ್ದರು. ಆಗಲೂ ಧನುಷ್ ತನ್ನ ವರ್ತನೆ ಸಮರ್ಥಿಸಿದ ಕಾರಣ ಸಿಟ್ಟಾಗಿ ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ಪೊಲಿಸ್ ಆಯುಕ್ತರು ತಿಳಿಸಿದ್ದಾರೆ.

ಕ್ರಿಮಿನಲ್‌ ಹಿನ್ನೆಲೆ
ಆರೋಪಿಗಳಲ್ಲಿ ಓರ್ವನ ಮೇಲೆ ಈ ಹಿಂದೆ ಪಾಂಡೇಶ್ವರ ಮತ್ತು ಕದ್ರಿ ಪೊಲೀಸ್‌ ಠಾಣೆಗಳಲ್ಲಿ ಹಲ್ಲೆ, ಎನ್‌ಡಿಪಿಎಸ್‌ ಪ್ರಕರಣ ದಾಖಲಾಗಿತ್ತು. ಧನುಷ್‌ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ದಾಳಿ ಮಾಡುವ ಸನ್ನಿವೇಶ ಮತ್ತು ಆಸ್ಪತ್ರೆಗೆ ಕೊಂಡೊಯ್ಯುವ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next