Advertisement

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

12:13 AM Apr 29, 2024 | Team Udayavani |

ಕುಂಬಳೆ: ಇಲ್ಲಿನ ಪೈವಳಿಕೆ ಚೇವಾರು ರಸ್ತೆಯ ಕಟ್ಟದಮನೆ ಸೇತುವೆಯ ಸಮೀಪ ಕಟ್ಟದಮನೆ ಗೋಪಾಲಕೃಷ್ಣ ಭಟ್‌ ಅವರು ತಮ್ಮ ತೋಟದ ಕಡೆಗೆ ಸಾಗುತ್ತಿದ್ದಾಗ ಬೈಕಿನಲ್ಲಿ ಹೆಲ್ಮೆಟ್‌ ಧರಿಸಿದ ಇಬ್ಬರು ಭಟ್ಟರ ಹತ್ತಿರ ಬಂದು ದಾರಿ ಕೇಳುವ ನೆಪದಲ್ಲಿ ಕೊರಳಲ್ಲಿದ್ದ ಎರಡೂವರೆ ಪವನ್‌ ತೂಕದ ಚಿನ್ನದ ಸರವನ್ನು ಸೆಳೆದು ಪರಾರಿಯಾಗಿದ್ದಾರೆ.

Advertisement

ಕಳ್ಳರು ಚೇವಾರು ಕಡೆಗೆ ವೇಗವಾಗಿ ತೆರಳಿದ್ದು ಹೆಲ್ಮೆಟ್‌ ಇದ್ದುದರಿಂದ ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಪಕ್ಕದ ಸಿಸಿ ಕೆಮರಾದಲ್ಲಿ ಕಳ್ಳರ ಕೃತ್ಯ ದಾಖಲಾಗಿದ್ದು ಕುಂಬಳೆ ಪೋಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next