Advertisement

ಪಿಎಸ್ಐ ಪರೀಕ್ಷೆ ಅಕ್ರಮ : ಪರೀಕ್ಷೆ ಬರೆದಿದ್ದ ಮತ್ತೋರ್ವ ವಶಕ್ಕೆ

09:11 PM May 02, 2022 | Team Udayavani |

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪರೀಕ್ಷೆ ಬರೆದ ಅಭ್ಯರ್ಥಿಯೋರ್ವನನ್ಬು ಸೋಮವಾರ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಪ್ರಭು ಶರಣಪ್ಪ ಎಂಬ ಅಭ್ಯರ್ಥಿಯೇ ಸಿಐಡಿ ವಶಕ್ಕೆ ಒಳಲಾಗಿದ್ದು, ಕಿಂಗ್ ಪಿನ್ ಆರ್ ಡಿ ಪಾಟೀಲ್ ಜೊತೆ ಲಿಂಕ್ ಹಿನ್ನೆಲೆ ಪ್ರಭುನನ್ನು ಸಿಐಡಿ ಪೊಲಿಸ್ ರು ವಶಕ್ಕೆ ಪಡೆದಿದ್ದಾರೆ. ಪ್ರಭು ಶರಣಪ್ಪ ಕಲಬುರಗಿ ನಗರದ ರಾಜಾಪುರ್ ಬಡಾವಣೆ ನಿವಾಸಿಯಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ತಾಯಿ ವಿರುದ್ದ ಅಸಮಾಧಾನ ಹೊರ ಹಾಕಿದ ಮಕ್ಕಳು

ಅಕ್ರಮ ಪರೀಕ್ಷೆಯ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಕಾಣಲು ಸೋಮವಾರ ಮಕ್ಕಳು ಆಗಮಿಸಿದ್ದರು. ಎಲ್ಲ ನಿನ್ನಿಂದಲೇ ಆಗಿದ್ದು, ಅಪ್ಪ ಜೈಲಿಗೆ ಹೋಗಿದ್ದಾರೆ. ಟಿವಿಯಲ್ಲಿ ಎಲ್ಲವನ್ನು ನೋಡಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದ ಘಟನೆ ನಡೆದಿದೆಯಲ್ಲದೇ ಮಕ್ಕಳನ್ನು ಕಂಡು ದಿವ್ಯಾ ಹಾಗರಗಿ ಕಣ್ಣಿರು ಹಾಕಿದರು. ಮತ್ತೊಂದೆಡೆ ದಿವ್ಯಾ ಹಾಗರಗಿ ಕಾಣಲು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾಗಿರಥಿ ಗುನ್ನಾಪುರ ಸಿಐಡಿ ತಂಡ ವಿಚಾರಣೆ ನಡೆಸುತ್ತಿರುವ ಐವಾನ ಶಾಹಿ ಅತಿಥಿ ಗೃಹಕ್ಕೆ ಆಗಮಿಸಿದ್ದರು. ‌ಆದರೆ ಭೇಟಿಗೆ ಅವಕಾಶ ಸಿಗದಿದ್ದರಿಂದ ನಿರಾಸೆಯಿಂದ ಮರಳಿದರು.

Advertisement

Udayavani is now on Telegram. Click here to join our channel and stay updated with the latest news.

Next