Advertisement

Suspended: ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಪಿಎಸ್ ಐ ತನ್ವೀರ್ ಹುಸೇನ್ ‌ಅಮಾನತ್ತು

12:14 PM Feb 21, 2024 | Team Udayavani |

ರಾಮನಗರ: ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಪಿಎಸ್ ಐ ತನ್ವೀರ್ ಹುಸೇನ್ ಅವರನ್ನು ಅಮಾನತ್ತುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ವಕೀಲರ ವಿರುದ್ಧ ದಾಖಲು ಮಾಡಿದ್ದ ಎಫ್ ಐಆರ್ ರದ್ದು ಮಾಡುವಂತೆ ವಕೀಲರ ಸಂಘ ಕಳೆದ ಮೂರೂ ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ ಇದಕ್ಕೆ ರಾಜಕೀಯ ನಾಯಕರೂ ಕೈಜೋಡಿಸಿದ್ದು ಸದನದಲ್ಲೂ ಈ ವಿಚಾರ ಮುನ್ನೆಲೆಗೆ ಬಂದಿತ್ತು ಇದರ ಮುಂದಿನ ಭಾಗವಾಗಿ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ವಕೀಲರು ಗುರುವಾರ ವಿಧಾನಸೌಧ ಚಲೋಗೆ ಸಿದ್ದತೆ ಮಾಡಿಕೊಂಡಿದ್ದರು.

ಇದರ ನಡುವೆ ವಿಧಾನ ಸಭೆಯಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಪಿಎಸ್ ಐ ತನ್ವೀರ್ ಹುಸೇನ್ ಅವರನ್ನು ಅಮಾನತ್ತು ಮಾಡಿರುವುದಾಗಿ ಹೇಳಿದ್ದಾರೆ. ಇದರೊಂದಿಗೆ ಮೂರೂ ದಿನಗಳಿಂದ ನಡೆಯುತ್ತಿದ್ದ ವಕೀಲರ ಧರಣಿ ಕೊನೆಗೊಂಡಿದೆ.

ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವರು ವಿವಾದದ ಕೇಂದ್ರ ಬಿಂದು ವಾಗಿರುಗ ವಕೀಲ ಚಾನ್ ಪಾಷಾ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಪಿಎಸ್ ಐ ಅಮಾನತ್ತು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಕೀಲರು ಸಂಭ್ರಮಾಚರಣೆ ನಡೆಸಿದರು.

Advertisement

ಇದನ್ನೂ ಓದಿ: Arrested: ಸಾಲ ವಸೂಲಿ ವೇಳೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್‌ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next