Advertisement

ಮನೆ ಬಾಗಿಲಿಗೆ ತರಕಾರಿ ಮುಟ್ಟಿಸಿ: ಅಂಗಡಿ

03:52 PM Apr 16, 2020 | Suhan S |

ಬೈಲಹೊಂಗಲ: ರೈತರು ಕಷ್ಟಪಟ್ಟು ಬೆಳೆದ ತರಕಾರಿ ಬೆಳೆಗಳನ್ನು ಜನತೆಯ ಮನೆ ಬಾಗಿಲಿಗೆ ಮುಟ್ಟಿಸಲು ಮುಂದಾಗಬೇಕೆಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ಶಾಸಕರ, ಉಪವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರು ಕೃಷಿ ಚಟುವಟಿಕೆ ಕೈಗೊಳ್ಳುವ ಜೊತೆಗೆ ವ್ಯಾಪಾರೀಕರಣ ಮನೋಭಾವನೆ ರೂಢಿಸಿಕೊಳ್ಳಬೇಕು. ಗ್ರಾಮಮಟ್ಟದಲ್ಲಿ ಮಾರಾಟ ಮಾಡಿ ನಂತರ ಪಟ್ಟಣಕ್ಕೆ ತಂದು ಮನೆ-ಮನೆಗೆ ಮಾರಾಟ ಮಾಡಲು ಮುಂದಾದಾಗ ತಾವು ಆರ್ಥಿಕ ಸಬಲರಾಗಲು ಸಾಧ್ಯ ಎಂದರು. ಶಾಸಕರಾದ ಮಹಾಂತೇಶ ಕೌಜಲಗಿ ಮತ್ತು ಮಹಾಂತೇಶ ದೊಡಗೌಡರ ಮಾತನಾಡಿದರು.

ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಕೈಗೊಂಡ ಕ್ರಮಗಳನ್ನು ವಿವರಿಸಿದರು. ತಾಲೂಕು ಆರೋಗ್ಯ ಅಧಿ ಕಾರಿ ಡಾ| ಎಸ್‌.ಎಸ್‌. ಸಿದ್ದನ್ನವರ ಮಾತನಾಡಿದರು. ಮಾಜಿ ಶಾಸಕರಾದ ಡಾ| ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ತಹಶೀಲ್ದಾರ್‌ ಡಾ| ದೊಡ್ಡಪ್ಪ ಹೂಗಾರ, ಡಿವೈಎಸ್‌ಪಿ ಜಿ.ಎಂ. ಕರುಣಾಕರಶೆಟ್ಟಿ, ಉಪವಿಭಾಗ ಮಟ್ಟದ ಅಧಿಕಾರಿಗಳು ಇದ್ದರು. ಸಮೀರ ಮುಲ್ಲಾ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next