Advertisement

ಕನಿಷ್ಠ ಸವಲತ್ತುಗಳನ್ನಾದರೂ ಒದಗಿಸಿ

12:28 AM Feb 28, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಒಟ್ಟು 63 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ, ಆರೋಗ್ಯ ತಪಾಸಣೆ, ಚುಚ್ಚುಮದ್ದು, ಮಹಿಳೆಯರಿಗೆ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿ ಸುವುದರ ಜತೆಗೆ ವಿವಿಧ ಸೇವೆಗಳನ್ನು ನಿಸ್ವಾರ್ಥದಿಂದ ನೆರವೇರಿಸುತ್ತಾರೆ.

Advertisement

ಕೋವಿಡ್‌-19 ಸಂದರ್ಭದಲ್ಲಿಯೂ ತಮ್ಮ ಪ್ರಾಣವನ್ನು ಲೆಕ್ಕಿಸದೇ, ಫ‌ಲಾನು ಭವಿಗಳ ಗಣನೀಯ ಸೇವೆ ಮಾಡಿದ್ದಾರೆ. ಈ ಸಂದರ್ಭ ದಲ್ಲಿ ಕೆಲವು ಸಾವಿಗೂ ತುತ್ತಾಗಿದ್ದಾರೆ. ಆದರೂ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಕನಿಷ್ಠ ಸೌಲಭ್ಯವಿಲ್ಲ, ಸರ್ಕಾರಿ ಸವಲತ್ತುಗಳಿಲ್ಲದೇ ಕೆಲಸ ಮಾಡುತ್ತಿ ದ್ದಾರೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು:
– ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಪುನರ್‌ರಚನೆಯ ಹೆಸರಿನಲ್ಲಿ ಅಂಗನವಾಡಿಗಳಲ್ಲಿ ಐಸಿಡಿಎಸ್‌ ಅನ್ನು ಖಾಸಗೀಕರ ಣಗೊಳಿಸುವುದನ್ನು ನಿಲ್ಲಿಸಿ.
– “ಪೋಷಣ್‌ ಮಟ್ಕಾ’ದಂತಹ ಯೋಜನೆಗಳ ಪರಿಚಯಿಸುವು ದನ್ನು ಮೊದಲು ಕೈಬಿಡಿ.
– ಎನ್‌ಇಪಿ-2020 ಅನ್ನು ಹಿಂದೆಗೆದುಕೊಂಡು, ಆರ್‌ಇಟಿ ಕಾಯ್ದೆಯಡಿ 0-6 ವಯಸ್ಸಿನ ಮಕ್ಕಳನ್ನು ಒಳಗೊಂಡ ಪ್ರತ್ಯೇಕ ಸಮಗ್ರ ಕಾನೂನು ರಚಿಸಬೇಕು.
– ಅಪೌಷ್ಟಿಕತೆ, ಕಾಯಿಲೆಗಳು, ಅನಕ್ಷರತೆಯಿಂದ ಸಮಾಜ ವನ್ನು ಮುಕ್ತಗೊಳಿಸಲು ಅಂಗನವಾಡಿಗಳನ್ನು ನೋಡಲ್‌ ಕೇಂದ್ರಗಳನ್ನಾಗಿ ಮಾಡಬೇಕು.
– ಎಲ್ಲ ಅಂಗನವಾಡಿ ಕಾರ್ಯಕರ್ತೆಯರನ್ನು 3ನೇ ದರ್ಜೆ ಮತ್ತು ಸಹಾಯಕರನ್ನು 4ನೇ ದರ್ಜೆಯ ಸರಕಾರಿ ನೌಕರರನ್ನಾಗಿ ನೇಮಿಸಬೇಕು.
– ಗ್ರಾಚ್ಯುಟಿ, ಪಿಂಚಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳು ಇತ್ಯಾದಿ ಸೇರಿದಂತೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಒದಗಿಸಬೇಕು.
– ಇಎಸ್‌ಐ, ಇಪಿಎಫ್ ಯೋಜನೆ ಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸೇರಿಸಬೇಕು.
– ಅಂಗನವಾಡಿ ನೌಕರರಿಗೆಂದು ರಾಷ್ಟ್ರೀಯ ಮಟ್ಟದ ಕಲ್ಯಾಣ ನಿಧಿ ರಚಿಸಬೇಕು.
– ಅಂಗನವಾಡಿ ಕಾರ್ಯಕರ್ತೆಯರಿಗೆ 32,000 ರೂ.ಗಳ ನುರಿತ ಕಾರ್ಮಿಕರ ಕನಿಷ್ಠ ವೇತನ ಮತ್ತು ಅರೆ ಕುಶಲ ಕಾರ್ಯಕರ್ತರಿಗೆ, ಸಹಾಯಕರಿಗೆ ರೂ.26,000 ವೇತನ ನೀಡಬೇಕು.
– ಅಂಗನವಾಡಿ ನೌಕರರಿಗೆ ವೇತನ ಸಹಿತ ವೈದ್ಯಕೀಯ ರಜೆ ನೀಡಬೇಕು.
– ಮಿನಿ-ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿ ರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾನವಾದ ವೇತನ ಮತ್ತು ಸವಲತ್ತುಗಳನ್ನು ನೀಡಬೇಕು.
– “ಪೋಷಣ್‌ ಟ್ರ್ಯಾಕರ್‌’ ಆ್ಯಪ್‌ ಹೆಸರಿನಲ್ಲಿ ಕಾರ್ಮಿಕರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು.
– ಸ್ಮಾರ್ಟ್‌ಫೋನ್‌ಗಳು, ಡೇಟಾ ಮತ್ತು ನಿರ್ವಹಣೆಯ ಎಲ್ಲ ವೆಚ್ಚಗಳನ್ನು ವಾಸ್ತವಿಕವಾಗಿ ಪಾವತಿಸಬೇಕು.
– ದೇಶಾದ್ಯಂತ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನು ತಿಳಿದುಕೊಳ್ಳಲು ವಾರ್ಷಿಕ ವರದಿಯನ್ನು ಬಡುಗಡೆಗೊಳಿಸಬೇಕು.
– ಅಂಗನವಾಡಿ ನೌಕರರಿಗೆ ವಾರ್ಷಿಕ ಶೇ.10ರಷ್ಟು ವೇತನ ಹೆಚ್ಚಳ ಮಾಡಬೇಕು. ಇದು ಬಾಕಿ ಉಳಿದಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವ ವೇತನ ಹೆಚ್ಚಳವನ್ನು ಸಹಾಯಕಿಯರಿಗೂ ವಿಸ್ತರಿಸಬೇಕು.
– ಶುದ್ಧ ಕುಡಿಯುವ ನೀರು, ಗ್ಯಾಸ್‌ ಸಂಪರ್ಕ, ಆಧುನಿಕ ಅಡುಗೆ ಸಲಕರಣೆಗಳಾದ ಕುಕ್ಕರ್‌, ಎಲೆಕ್ಟ್ರಿಕ್‌ ರೊಟ್ಟಿ ಮೇಕರ್‌, ಇಡ್ಲಿ ಮೇಕರ್‌ ಮುಂತಾದ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಬೇಕು.
– ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರನ್ನು ಎಎನ್‌ಎಂ, ಪ್ರಾಂತಿಕ ಶಾಲಾ ಶಿಕ್ಷಕಿಯರು, ಗ್ರಾಮ ಸೇವಕರು ಎಂಬ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕು.
– ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಅಕಾ ಲಿಕ ಮರಣಕ್ಕೆ ತುತ್ತಾದರೆ, ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಯವುದೇ ಷರತ್ತುಗಳಿಲ್ಲದೇ ಕೆಲಸ ನೀಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next