Advertisement

ಜಮಖಂಡಿ ಕಾಲೇಜಿಗೆ ಸೌಕರ್ಯ ಕಲ್ಪಿಸಿ

12:48 PM Nov 05, 2019 | Suhan S |

ಜಮಖಂಡಿ: ನಗರದ ಸರ್ಕಾರಿ ಪಿ.ಬಿ. ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಮೂಲಸೌಕರ್ಯ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ನಗರದ ಸರ್ಕಾ ಮಹಾವಿದ್ಯಾಲಯದಮುಖ್ಯದ್ವಾರ ಬೆಳಗ್ಗೆ 7ಗಂಟೆಗೆ ಆರಂಭಿಸದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಬಸ್‌ ನಿಲ್ದಾಣ ರಸ್ತೆ ಮಾರ್ಗವಾಗಿ ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿ ವಿರುದ್ಧ ಘೋಷಣೆ ಕೂಗುತ್ತಾ ಶಾಸಕ ಆನಂದ ನ್ಯಾಮಗೌಡ ನಿವಾಸಕ್ಕೆ ತೆರಳಿದರು. ಶಾಸಕರು ವಾಯುವಿಹಾಕ್ಕೆ ಹೋಗಿದ್ದ ವಿಷಯ ತಿಳಿದ ಎಲ್ಲ ವಿದ್ಯಾರ್ಥಿಗಳು ಮರಳಿ ನಗರದ ಎ.ಜಿ.ದೇಸಾಯಿ ವೃತದಲ್ಲಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಬಿಇಒ ಸಿ.ಎಂ. ನ್ಯಾಮಗೌಡ ಕಾಲೇಜಿಗೆ ಧಾವಿಸಿ ವಿದ್ಯಾರ್ಥಿಗಳ ಮನವಿ ಆಲಿಸಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಕಾಲೇಜಿನ ಮುಖ್ಯದ್ವಾರ ತೆಗೆಸುವುದಾಗಿ ಅಲ್ಲದೆ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸುವ ಭರವಸೆ ನೀಡಿದರು. ತಾಲೂಕಿನ ಅನೇಕ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಬೆಳಗ್ಗೆ ಮುಖ್ಯದ್ವಾರದ ಬಳಿ ನಿಲ್ಲಬೇಕು. ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಕುಂಠಿತವಾಗುತ್ತಿದೆ. ಕಾಲೇಜಿನ ಪ್ರಾಂಶುಪಾಲರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಕಾಲೇಜಿನ ಆವರಣದಲ್ಲಿ ಶುದ್ಧ ಕುಡಿವ ನೀರು ವ್ಯವಸ್ಥೆ, ವಿದ್ಯುತ್‌ ಸಂಪರ್ಕ ಸಮರ್ಪಕವಾಗಿಲ್ಲ.

ಕ್ಲಾಸ್‌ ರೂಮ್‌ಗಳಲ್ಲಿ ಬೆಳಕಿನ ಅಭಾವವಿದ್ದು, ಸುಟ್ಟ ದೀಪಗಳಿವೆ. ಆಟದ ಮೈದಾನ ಇಲ್ಲ. ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳಿಗೆ ಕ್ರೀಡೆ ಮರೀಚಿಕೆಯಾಗಿದೆ ಎಂದು ಆರೋಪಿಸಿದರು. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದೇ ಬೇಜವಾರಿಯಾಗಿ ವರ್ತಿಸಿದ ಪ್ರಾಚಾರ್ಯನನ್ನು ಆರಕ್ಷರು ತರಾಟೆಗೆ ತೆಗೆದುಕೊಂಡರು. ಪ್ರತಿದಿನ ಸರಿಯಾಗಿ ಮುಖ್ಯದ್ವಾರ ತೆಗೆಯಲಾರದ್ದಕ್ಕೆ ಮಕ್ಕಳು ರಸ್ತೆ ಪಕ್ಕದಲ್ಲಿ, ಬಸ್‌ ನಿಲ್ದಾಣದಲ್ಲಿ ನಿಲ್ಲುವಂತಾಗಿದೆ. ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸಿದರ ಪ್ರಾಚಾರ್ಯರೆ ಹೊಣೆಗಾರರು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next