Advertisement

ರೈಲೆ ನಿಲ್ದಾ ಣದಲ್ಲಿ ಮೂಲ ಸೌಲಭ್ಯ ಕಲ್ಪಿಸಿ

05:02 PM Sep 24, 2019 | Suhan S |

ಬಂಗಾರಪೇಟೆ: ಪಟ್ಟಣದಲ್ಲಿರುವ ರೈಲ್ವೆ ಜಂಕ್ಷನ್‌ನಲ್ಲಿ ಪ್ರಯಾಣಿಕರಿಗೆ ಎಕ್ಸಲೇಟರ್‌ ಸೇರಿ ಮೂಲ ಸೌಲಭ್ಯ ಒದಗಿಸಬೇಕು ಎಂದು ಜೈ ಭಾರತ್‌ ಯುವ ಸೇನೆಯ ತಾಲೂಕು ಅಧ್ಯಕ್ಷ ಎನ್‌. ಶಿವಕುಮಾರ್‌ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ನಿಲ್ದಾಣದಿಂದ 25 ಸಾವಿರ ಪ್ರಯಾಣಿಕರು ಬೆಂಗಳೂರು, ಚೆನ್ನೈ ಮುಂತಾದ ನಗರಗಳಿಗೆ ಪ್ರಯಾಣ ಮಾಡುತ್ತಿದ್ದಾರೆ. ಪ್ರತಿ ದಿನ ಸಾವಿರಾರು ಜನರು, ಮಹಿಳೆಯರು, ವಯೋವೃದ್ಧರು ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅವರಿಗೆ ಮೆಟ್ಟಿಲು ಹತ್ತಲು ಹಾಗೂ ಇಳಿಯಲು ಆಗುತ್ತಿಲ್ಲ. ಆದ್ದರಿಂದ ಇವರಿಗೆ ಸುಲಭವಾಗಿ ಓಡಾಡಲು ಎಕ್ಸಲೇಟರ್‌ಅನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು. ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಮುಖ್ಯರಸ್ತೆಗಳಲ್ಲಿ ವಿದ್ಯುತ್‌ ದೀಪಗಳು ರಿಪೇರಿಯಾಗಿರುವುದರಿಂದ ರಾತ್ರಿ ವೇಳೆಯಲ್ಲಿ ಓಡಾಡಲು ಪ್ರಯಾಣಿಕರು ಭಯಪಡುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕಾಗಿದೆ. ರೈಲ್ವೆ ನಿಲ್ದಾಣ ದಿಂದ ಹೊಸ ಬಸ್‌ ನಿಲ್ದಾಣಕ್ಕೆ

ಹೋಗುವ ರಸ್ತೆ ಸಂಪೂರ್ಣ ನಾಶವಾಗಿ  ದ್ದರೂ ಇನ್ನೂ ರಿಪೇರಿ ಮಾಡದೇ ನಿರ್ಲಕ್ಷ್ಯವಹಿಸಿರುವುದರ ಬಗ್ಗೆ ಎಚ್ಚೆತ್ತುಕೊಳ್ಳ  ಬೇಕೆಂದು ಒತ್ತಾಯಿಸಿ ರೈಲ್ವೆ ಅಧಿಕಾರಿಗಳಿಗೆ ಮನವಿ ನೀಡಿದರು. ಜೈ ಭಾರತ್‌ ಯುವ ಸೇನೆಯ ತಮ್ಮೆನ ಹಳ್ಳಿಹಾಲಪ್ಪ, ಸಾಯಿ, ಪಾರ್ತಿಭನ್‌, ಕುಟ್ಟಿ, ಆರ್‌.ರಾಮ್‌ಕುಮಾರ್‌, ಚಲಪತಿ, ಜಗದೀಶ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next