Advertisement

ಟಿಪ್ಪು ಸುಲ್ತಾನ್‌ ಜಯಂತಿ ರದ್ದು ವಿರೋಧಿಸಿ ಪ್ರತಿಭಟನೆ

11:10 AM Aug 04, 2019 | Suhan S |

ಚಿತ್ತಾಪುರ: ಮೈಸೂರಿನ ಹುಲಿ ಎಂದೇ ಪ್ರಖ್ಯಾತಿ ಪಡೆದಿರುವ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ರದ್ದುಗೊಳಿಸಿ ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್‌-2 ತಹಶೀಲ್ದಾರ್‌ ರವೀಂದ್ರ ದಾಮಾ ಅವರಿಗೆ ಮನವಿ ಸಲ್ಲಿಸಿದರು.

Advertisement

ಟಿಪ್ಪು ಸುಲ್ತಾನ್‌ ಒಂದು ಸಮುದಾಯ, ಒಂದು ರಾಜ್ಯಕ್ಕೆ ಸೀಮಿರಾದವರಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಅವರ ಛಾತಿ ಹಾಗೂ ರಾಜ್ಯಕ್ಕಾಗಿ ಮಕ್ಕಳನ್ನು ಒತ್ತೆಯಿಟ್ಟ ಅವರ ತ್ಯಾಗದಿಂದಾಗಿ ಅವರು ಇತಿಹಾಸದಲ್ಲಿ ಅಮರರಾಗಿದ್ದಾರೆ. ರಾಕೇಟ್ ತಂತ್ರಜ್ಞಾನ, ರೇಷ್ಮೆ ಬೆಳೆ, ನೀರಾವರಿ, ದೇವಸ್ಥಾನಗಳಿಗೆ ದತ್ತಿಯಂತಹ ಹಲವಾರು ಕ್ರಮಗಳಿಂದಾಗಿ ಅವರು ಜನಾನುರಾಗಿ ಆಗಿದ್ದರು. ಅಂತಹ ಮಹಾನ್‌ ವ್ಯಕ್ತಿಯ ಸಾಧನೆಗಳನ್ನು ಇಂದಿನ ಪೀಳಿಗೆಗೆ ಮುಟ್ಟಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿತ್ತು. ಆದರೆ ಸಂಘ ಪರಿವಾರ ಟಿಪ್ಪು ಸುಲ್ತಾನ್‌ರನ್ನು ಬರೀ ಮುಸ್ಲಿಂ ಎನ್ನುವ ಕಾರಣಕ್ಕಾಗಿ ದ್ವೇಷದಿಂದ ಕಂಡು ಜಯಂತಿಯನ್ನು ರದ್ದು ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. ಗ್ರೇಡ್‌-2 ತಹಶೀಲ್ದಾರ್‌ ರವೀಂದ್ರ ದಾಮಾ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಶಹಬಾದ ಡಿವೈಎಸ್ಪಿ ಕೆ. ಬಸವರಾಜ, ಸಿಪಿಐ ಪಂಚಾಕ್ಷರಿ ಸಾಲಿಮಠ, ದಲಿತ ಮತ್ತು ಮೈನಾರಿಟೀಸ್‌ ಸೇನೆ ತಾಲೂಕು ಅಧ್ಯಕ್ಷ ಆಸೀಫ್‌ ಶೇಖ, ಎಂ.ಡಿ ಅಲಿ, ಯೂತ್‌ ಅಧ್ಯಕ್ಷ ಎಂ.ಡಿ. ಹುಸೇನ್‌, ವಾಸೀಂ ಖಾನ್‌, ಹುಸೇನ್‌ ಪಗಡಿ, ಬಾಬಾ ಸೌದಾಗರ್‌, ಶೇಖ ಮೋಸಿನ್‌, ಶಫೀ ವಸ್ತಾದ್‌, ಹಫೀಜ್‌, ನಯೀಮ್‌, ಇಸ್ಮಾಯಿಲ್, ಇಬ್ರಾಹೀಂ ಶೇಖ, ಲತೀಫ್‌ ದಿಗ್ಗಾಂವ, ಅಖೀಲ್, ಖಾಲೀಕ್‌, ಫಾರೋಖ, ಅಬ್ಬು, ಯಾಸೀನ್‌ ಇಬ್ರಾಹೀಂಪುರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next