Advertisement

ಶ್ರೀರಂಗಪಟ್ಟಣ : ಎಂವಿಎಸ್ ಪುಂಡಾಟಿಕೆ ವಿರೋಧಿಸಿ ಹೆದ್ದಾರಿ ತಡೆ, ಪ್ರಯಾಣಿಕರ ಪರದಾಟ

01:46 PM Dec 22, 2021 | Team Udayavani |

ಶ್ರೀರಂಗಪಟ್ಟಣ : ಕನ್ನಡ ಬಾವುಟ ಸುಟ್ಟು ರಾಯಣ್ಣನ ಪ್ರತಿಮೆ ಭಗ್ನಗೊಳಿಸಿರುವ ಎಂ.ಇ.ಎಸ್.ಪುಂಡಾಟಿಕೆ ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಕರವೇ ತಾಲೂಕು ಅಧ್ಯಕ್ಷ ಚಂದಗಾಲು ಶಂಕರ್ ನೇತೃತ್ವದಲ್ಲಿ ವಿವಿಧ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಕುವೆಂಪು ವೃತ್ತದಲ್ಲಿ ಮೈಸೂರು ಬೆಂಗಳೂರು ಹೆದ್ದಾರಿ ತಡೆ ಮಾಡಿ ಎಂವಿಎಸ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

Advertisement

ಪುಂಡಾಂಟಿಕೆ ಮಾಡ್ತಿರೋ ಎಂ.ಇ.ಎಸ್.ಕಾರ್ಯಕರ್ತರ ವಿರುದ್ದ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಅಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಂಪೇಗೌಡ ಯುವ ವೇದಿಕೆ ಅಧ್ಯಕ್ಷ ಮಹೇಶ್, ತಾಪಂ ಮಾಜಿ ಅಧ್ಯಕ್ಷ ಸಂದೇಶ, ಕಾಂಗ್ರೇಸ್ ಯುವ ಮುಖಂಡ ದರ್ಶನ್ ಲಿಂಗರಾಜು, ಪುರಸಭೆ ಉಪಾಧ್ಯಕ್ಷ ಪ್ರಕಾಶ್, ಜೈಕರ್ನಾಟಕ ಕುಮಾರಸ್ವಾಮಿ, ಆಟೊ ಕೃಷ್ಣ, ಬಿಜೆಪಿ ಉಮೇಶ್ ಕುಮಾರ್, ಸ್ವಾಮೀಗೌಡ, ರಾಂಪುರ ಪುಟ್ಟ, ಮಹದೇವು,ಇತರ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಭಾಗವಹಿಸಿದರು.

ಒಂದು ಗಂಟೆಗೂ ಹೆಚ್ಚು ಹೊತ್ತು ಹೆದ್ದಾರಿ ತಡೆ ಮಾಡಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು, ವಾಹನ ಪ್ರಯಾಣಿಕರು ಪರದಾಡುವಂತಾಯಿತು.

ಇದನ್ನೂ ಓದಿ : ತೀರ್ಥಹಳ್ಳಿ: ಬೆಳಗಾವಿ ಘಟನೆಯನ್ನು ಖಂಡಿಸಿ ಗೂಂಡಾಗಳನ್ನು ತಕ್ಷಣ ಬಂದಿಸುವಂತೆ ಕರವೇ ಮನವಿ

Advertisement
Advertisement

Udayavani is now on Telegram. Click here to join our channel and stay updated with the latest news.

Next