Advertisement

ಪ್ರೌಢಶಾಲೆಗಾಗಿ 8ರಂದು ಪ್ರತಿಭಟನೆ

01:09 PM Jun 04, 2022 | Team Udayavani |

ಮಸ್ಕಿ: ತಾಲೂಕಿನ ಬುದ್ದಿನ್ನಿ (ಎಸ್‌) ಪ್ರೌಢಶಾಲೆ ಆರಂಭಕ್ಕೆ ಒತ್ತಾಯಿಸಿ ಜೂ.8ರಂದು ಪುನರ್‌ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಸ್ಡಿಎಂಸಿ ಅಧ್ಯಕ್ಷ ನಾಗರೆಡ್ಡಿ ದೇವರಮನಿ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುದ್ದಿನ್ನಿ ಗ್ರಾಮಕ್ಕೆ ಪ್ರೌಢಶಾಲೆ ಅಗತ್ಯವಿದೆ ಎನ್ನುವ ಬೇಡಿಕೆ ಅನುಸಾರ ಇಲ್ಲಿ ಪ್ರೌಢಶಾಲೆ ಮಂಜೂರಾಗಿದೆ. ಇದಕ್ಕಾಗಿ ಗ್ರಾಮಸ್ಥರು ಭೂಮಿ ದೇಣಿಗೆ ನೀಡಿದ್ದು, ಲಕ್ಷಾಂತರ ರೂ. ಅನುದಾನ ಖರ್ಚು ಮಾಡಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ, ಇದುವರೆಗೂ ಇಲ್ಲಿ ಪ್ರೌಢಶಾಲೆ ತರಗತಿಗಳು ಆರಂಭ ಮಾಡಿಲ್ಲ.

ಹಲವು ವರ್ಷಗಳಿಂದ ಬುದ್ದಿನ್ನಿ ಸೇರಿ ಸುತ್ತಲಿನ ಸುಮಾರು 10ಕ್ಕೂ ಹೆಚ್ಚು ಹಳ್ಳಿಗರು ಹೋರಾಟ ಮಾಡಿದರ ಫಲವಾಗಿ ಕಳೆದ ವರ್ಷ 2020-21ನೇ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಗಳನ್ನು ಆರಂಭ ಮಾಡಿದ್ದರು. ಸುಮಾರು 70 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಭ್ಯಾಸ ಮಾಡಿದ್ದಾರೆ. ಈಗ ಇಲ್ಲಿ 9ನೇ ತರಗತಿಗೆ ಶಾಲೆ ಆರಂಭ ಮಾಡಬೇಕಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಇದುವರೆಗೂ ತರಗತಿ ಆರಂಭವಾಗಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯೂ ಚಕಾರವೆತ್ತಿಲ್ಲ. ಹೀಗಾಗಿ ಜೂ.8ರಂದು ಪುನಃ ಹೋರಾಟ ಹಮ್ಮಿಕೊಳ್ಳಲಾಗಿದೆ. ಮುದಬಾಳ ಕ್ರಾಸ್‌ ಬಳಿ ರಸ್ತೆ ಸಂಚಾರ ತಡೆ ನಡೆಸುವ ಮೂಲಕ ಪ್ರೌಢಶಾಲೆ ಮಂಜೂರಿಗಾಗಿ ಆಗ್ರಹಿಸಲಾಗುತ್ತದೆ ಎಂದು ಹೇಳಿದರು.

ಮುಖಂಡರಾದ ಚಂದ್ರಶೇಖರ ಕ್ಯಾತನಹಟ್ಟಿ, ಅನಿಲ್‌ಕುಮಾರ್‌, ದುರುಗಪ್ಪ, ಮೌನೇಶ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next