Advertisement

Protest: ಗೃಹ ಸಚಿವರ ಮನೆ ಮುಂದೆ ಧರಣಿ

09:52 PM May 30, 2024 | Team Udayavani |

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ವಿರೋಧಿಸಿ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಅವರ ಗೊಲ್ಲಹಳ್ಳಿ ನಿವಾಸದೆದುರು ಧರಣಿಗೆ ಮುಂದಾದ ಮಾಜಿ ಸಚಿವ ಸೊಗಡು ಎಸ್‌. ಶಿವಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ, ಬಿ. ಸುರೇಶ ಗೌಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಆಂಜನಪ್ಪ ನೇತೃತ್ವದ ಹೋರಾಟಗಾರರನ್ನು ಬಂಧಿಸಿ ಬಿಡುಗಡೆಗೊಳಿಸಲಾಯಿತು.

Advertisement

ಸೊಗಡು ಶಿವಣ್ಣ ನೇತೃತ್ವದಲ್ಲಿ  ಪರಮೇಶ್ವರ್‌ ಮನೆ ಮುಂದೆ ಬೆಳಗ್ಗೆ ಧರಣಿ ನಡೆಸಲು ಸೇರಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿ ನಗರದ ಡಿ.ಆರ್‌.ಗ್ರೌಂಡ್‌ ಬಳಿ ಕರೆತಂದರು. ಪೊಲೀಸರ ಕಣ್ತಪ್ಪಿಸಿ ಗೃಹ ಸಚಿವರ ಮನೆ ಮುಂದೆ ಶಾಸಕ ಬಿ.ಸುರೇಶ್‌ ಗೌಡ ಪ್ರತಿಭಟನೆಗೆ ಮುಂದಾದಾಗ ಅವರನ್ನೂ  ಬಂಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next