Advertisement

ಶೌಚಗೃಹ ನಿರ್ಮಾಣ ವಿಚಾರ: ಸಭೆಯಲ್ಲಿ ಧರಣಿ ನಡೆಸಿದ ಜಿಪಂ ಸದಸ್ಯರು

02:23 PM Feb 12, 2021 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶೌಚಗೃಹ ನಿರ್ಮಾಣಕ್ಕೆ ಹಣ ಮಂಜೂರಾಗಿ ನಾಲ್ಕು ವರ್ಷ ಕಳೆದರೂ ಯಾಕೆ ಶೌಚಗೃಹ ನಿರ್ಮಿಸಿಲ್ಲ. ಜನರಿಗೆ ನಾವು ಹೇಗೆ ಮುಖ ತೋರಿಸಬೇಕು ಎಂದು ಆರೋಪಿಸಿ ಜಿಪಂ ಕೆಡಿಪಿ ಸಭೆಯಲ್ಲಿ ಸದಸ್ಯರಿಬ್ಬರು ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ನಡೆಯಿತು.

Advertisement

ಇಷ್ಟು ವರ್ಷ ಕೆಲಸ ಮಾಡದೆ ಈಗ ಗ್ರಾಪಂಗೆ ವಹಿಸಲು ಮುಂದಾಗಿರುವುದಕ್ಕೆ ಸದಸ್ಯರಾದ ಕೇಶವರೆಡ್ಡಿ, ಶಿವಜ್ಯೋತಿ ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಅಧಿಕಾರಿಗಳ ಬೇಜವಾಬ್ದಾರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಕೂಡ ಗರಂ ಆದರು.

ಮಹಿಳಾ ಇಲಾಖೆ ಉಪ ನಿರ್ದೇಶಕ ವೀರಣಗೌಡ ಅವರನ್ನು ತರಾಟೆಗೆ ತೆಗೆದುಕೊಂಡು, 120 ಅಂಗನವಾಡಿ ಕೇಂದ್ರಗಳಿಗೆ ಶೌಚಗೃಹ ನಿರ್ಮಾಣಕ್ಕೆ ಹಣ ಬಿಡುಗಡೆ ಆಗಿದೆ. ಕಾಮಗಾರಿ ಮಾಡಬೇಕಿದ್ದ ಕ್ಯಾಶುಟಿಕ್ ಏಜೆನ್ಸಿ ಬೇಜವಾಬ್ದಾರಿ ವಹಿಸಿದ್ದಕ್ಕೆ ಸದಸ್ಯರು ಕೋಪಗೊಂಡಿದ್ದಾರೆ. 2016-17  ನೇ ಸಾಲಿನಲ್ಲಿ ಅನುದಾನ  ಬಿಡುಗಡೆ ಆಗಿದ್ದು,  ನಾಲ್ಕು ವರ್ಷದಿಂದ ಖಜಾನೆಯಲ್ಲಿಯೇ ಅನುದಾನ ಕೊಳೆಯುತ್ತಿದೆ. ನಿಮ್ಮ ವಿರುದ್ಧ ಯಾಕೆ ಕ್ರಮ ಜರುಗಿಸಬಾರದು ಎಂದರು. ಕೊನೆಗೆ ಸಿಇಒ ಸದಸ್ಯರ ಮನವೊಲಿಸಿ ಸಭೆ ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next