Advertisement

16 ರಂದು ಬಬಲೇಶ್ವರದಲ್ಲಿ ಮೀಸಲಾತಿ ಹಕ್ಕೊತ್ತಾಯಕ್ಕೆ ಪಂಚಮಸಾಲಿ ಆಲಗೂರ ಪೀಠದಿಂದ ಪ್ರತಿಭಟನೆ

12:51 PM Dec 15, 2022 | keerthan |

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗಾಗಿ ಡಿ.16 ರಂದು ಬಬಲೇಶ್ವರ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

Advertisement

ಗುರುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಪಂಚಮಸಾಲಿ ಆಲಗೂರ ಪೀಠದ ಜಗದ್ಗುರು ಡಾ.ಮಹದೇವ ಶ್ರೀಗಳು ಹಾಗೂ ಪೀಠದ ಉಸ್ತುವಾರಿ ಡಾ.ಸುರೇಶ ಬಿರಾದಾರ ಬೆಳಗಾವಿ ಅಧಿವೇಶನಕ್ಕೆ ಪೂರ್ವದಲ್ಲಿ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಡಿ.19 ರೊಳಗೆ ಮೀಸಲಾತಿ ಕಲ್ಪಿಸುವ ಕುರಿತು ಭರವಸೆ ನೀಡಿದೆ. ಸರ್ಕಾರದ ಮೇಲೆ ಒತ್ತಡ ಹೇರಲು ಬಬಲೇಶ್ವರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಕುಲ ಶಾಸ್ತ್ರೀಯ ಅಧ್ಯಯನ ನಡೆಸುವುದಾಗಿ ಸರ್ಕಾರ ಹೇಳಿದೆ. ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ ಸಮೀಕ್ಷೆ ನಡೆಸಿದೆ. ಈಗ ಈ ಎಲ್ಲ ಪ್ರಕ್ರಿಯೆಗಳು ಬಹುತೇಕ ಅಂತಿಮಗೊಂಡಿದ್ದು, ಹೀಗಾಗಿ ಸರ್ಕಾರ ನಿಗದಿತ ಅವಧಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಆಲಗೂರ ಪೀಠಕ್ಕೆ ಬರುವ ಮುನ್ನ ನಾವೂ ಕೂಡ ಈ ಹಿಂದೆ ಮೀಸಲಾತಿ ಹಕ್ಕೊತ್ತಾಯದ ಕುರಿತು ನಡೆದ ಪಾದಯಾತ್ರೆ, ಧರಣಿ ಸೇರಿದಂತೆ ಇತರೆ ಎಲ್ಲ ಹೋರಾಟಗಳಲ್ಲೂ ಪಾಲ್ಗೊಂಡು ಹೋರಾಟ ಮಾಡಿದೆ. ಇದೀಗ ಆಲಗೂರ ಪೀಠದಿಂದ ಇದೀಗ ಜನಸಮುದಾಯದ ಜಾಗೃತಿ ಹಾಗೂ ಹಕ್ಕೊತ್ತಾಯದ ಹೋರಾಟಕ್ಕಾ ಬೃಹತ್ ಸಮಾವೇಶ ಪಂಚಮಸಾಲಿ ಸಮಾಜದ ಮಠಾಧೀಶರ ಒಕ್ಕೂಟ ಮಠಾಧೀಶರು, ಸಚಿವರು, ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

Advertisement

ಪಂಚಮಸಾಲಿ ಸಮಾಜದ ಮೂರು ಪೀಠಗಳು ಮೀಸಲಾತಿ ಹಕ್ಕೊತ್ತಾಯದ ಏಕ ಗುರಿ ಹೊಂದಿದ್ದು, ಪ್ರತ್ಯೇಕತೆ ಎಂಬುದಿಲ್ಲ. ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು, ಹರಿಹರ ಪೀಠದ ವಚನಾನಂದ ಶ್ರೀಗಳು ನಡೆಸಿದ ಬಹುತೇಕ ಎಲ್ಲ ಹೋರಾಟಗಳಲ್ಲೂ ನಾವು ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ ಎಂದರು.

ಇದೀಗ ಸಮುದಾಯದ ಜನರಲ್ಲಿ ಜಾಗೃತಿ ಹಾಗೂ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ನಮ್ಮ ಭಾಗದಲ್ಲಿ ನಮ್ಮ ಪೀಠದಿಂಸಲೂ ಹೋರಾಟ ನಡೆಸಿದ್ದೇವೆ. ಡಿ.16 ರಂದು ಬಬಲೇಶ್ವರ ಗುರುಪಾದೇಶ್ವರ ಮಠದಿಂದ ತಹಶಿಲ್ದಾರರ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಗುತ್ತದೆ. ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಪ್ರಕಟಿಸುವಂತೆ ಆಗ್ರಹಿಸುವುದು ಹೋರಾಟದ ಮೂಲ ಉದ್ದೇಶ ಎಂದರು.

ಧರಿದೇವರ ಮಠದ ಲಕ್ಷ್ಮಣ ಶ್ರೀಗಳು, ಬಿ.ಎಸ್. ಪಾಟೀಲ, ಶಂಕರಗೌಡ ಬಿರಾದಾರ, ಲತಾ ಬಿರಾದಾರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next