Advertisement

ಬೆಳಗಾವಿ: ರಾಜ್ಯೋತ್ಸವದಂದು ಎಂಇಎಸ್ ನಿಂದ ನಾಡದ್ರೋಹಿ ಘೋಷಣೆ, ಪುಂಡಾಟಿಕೆ

04:01 PM Nov 01, 2020 | keerthan |

ಬೆಳಗಾವಿ: ಎಂಇಎಸ್ ಕರಾಳ ದಿನಾಚರಣೆಗೆ ತಡೆಯೊಡ್ಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನಾ ಸಭೆ ನಡೆಸುತ್ತಿರುವ ಎಂಇಎಸ್, ಶಿವಸೇನೆ ಮುಖಂಡರು ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟಿಕೆ ಮೆರೆದರು.

Advertisement

ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದರು.  ಬೆಳಗಾವಿಯ ಮರಾಠಾ ಮಂದಿರ ಮಂಗಲ‌ ಕಾರ್ಯಾಲಯದಲ್ಲಿ‌ ಎಂಇಎಸ್ ಸಭೆ ನಡೆಸಿದರು.

ಬೆಳಗಾವಿಯ ರೇಲ್ವೆ ಓವರ್ ಬ್ರಿಡ್ಜ್ ಬಳಿ ಇರುವ ಮರಾಠಾ ಮಂದಿರ ಮಂಗಲ ಕಾರ್ಯಾಲಯದಲ್ಲಿ ಸಭೆ ನಡೆಸಿದರು.

ರಹೆಂಗೇ ತೋ ಮಹಾರಾಷ್ಟ್ರ ಮೇ ನಹೀ ತೋ ಜೈಲ್ ಮೇ ಎಂದು ಘೋಷಣೆ ಕೂಗಿದರು. ಪ್ರತಿ ವರ್ಷ ಕರಾಳ ದಿನಾಚರಣೆ ಆಚರಿಸುತ್ತಿದ್ದ ಎಂಇಎಸ್‌ ಗೆ ಅನುಮತಿ ನೀಡಿಲ್ಲ. ಚುನಾವಣಾ ಸಭೆಯ ನೆಪದಲ್ಲಿ ಕಪ್ಪು ಪಟ್ಟಿ ಧರಿಸಿ ರಾಜ್ಯೋತ್ಸವವನ್ನು ವಿರೋಧಿಸಿದರು

Advertisement

Udayavani is now on Telegram. Click here to join our channel and stay updated with the latest news.

Next