Advertisement

ಉಡುಪಿಯಲ್ಲಿ ಮರ ಬುಡ ಸಮೇತ ಕಿತ್ತು ಬಿದ್ದಿದೆಯಲ್ಲಾ;ಡಿಸಿಎಂ ಪರಮೇಶ್ವರ್

02:59 PM Jun 10, 2018 | |

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಶಾಸಕರ ಬೆಂಬಲಿಗರ ಪ್ರತಿಭಟನೆ ಭಾನುವಾರವೂ ಮುಂದುವರಿದಿದ್ದು , ಉಡುಪಿ ಎಂಎಲ್‌ಸಿ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಯಿತು. 

Advertisement

ಉಡುಪಿ,ಕುಂದಾಪುರದ ಕೆಲ ಪ್ರತಾಪ್‌ ಚಂದ್ರ ಶೆಟ್ಟಿ ಅವರ ಬೆಂಬಲಿಗರೊಂದಿಗೆ ಕರವೇ ಪ್ರವೀಣ್‌ ಶೆಟ್ಟಿ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪರಮೇಶ್ವರ್‌ ಅವರಿಗೆ ಮನವಿ ಮಾಡಿದರು.  

ಉಡುಪಿ ಜಿಲ್ಲೆಯಲ್ಲಿ 5 ಕ್ಕೆ 5 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದ ಹಿನ್ನಲೆಯಲ್ಲಿ ಏಕೈಕ ಪರಿಷತ್‌ ಸದಸ್ಯರಾಗಿದ್ದ ಪ್ರತಾಪ್‌ ಚಂದ್ರ ಶೆಟ್ಟಿ ಅವರಿಗೆ ಜಿಲ್ಲಾವಾರು ಮತ್ತು ಜಾತಿವಾರು ಪ್ರಾತಿನಿಧ್ಯ ಸಿಗಬಹುದು ಎನ್ನಲಾಗಿತ್ತು.

ಬುಡಸಮೇತ ಮರ ಕಿತ್ತು ಹಾಕಿದ್ದೀರಿ !

Advertisement

ಮನವಿ ಸ್ವೀಕರಿಸಿದ ಪರಮೇಶ್ವರ್‌ ಉಡುಪಿಯಲ್ಲಿ ಮರವನ್ನು ಬುಡ ಸಮೇತ ಕಿತ್ತು ಹಾಕಿದ್ದೀರಿ . ಸಚಿವ ಸ್ಥಾನ ಬೇಕಾ ಎಂದರು. ಪ್ರತಾಪ್‌ ಚಂದ್ರ ಶೆಟ್ಟಿ ಅವರು ಹಿರಿಯರಿದ್ದಾರೆ.ಅವರಿಗೆ ಮುಂದಿನ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next