Advertisement

ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

03:42 PM Feb 13, 2022 | Team Udayavani |

ಶಹಾಬಾದ: ಡಾ| ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ನ್ಯಾಯಾಧೀಶರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಸಂವಿಧಾನ ಸರಂಕ್ಷಣಾ ಸಮಿತಿ ವತಿಯಿಂದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್‌ ವೃತ್ತದ ವರೆಗೆ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಹಣಮಂತರಾವ್‌ ಪಾಟೀಲಗೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಸಂವಿಧಾನ ಸರಂಕ್ಷಣಾ ಸಮಿತಿ ಹಿರಿಯ ಮುಖಂಡ ಮಲ್ಲೇಶಿ ಸಜ್ಜನ್‌, ರಾಯಚೂರು ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿ ಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಸರಂಕ್ಷಣಾ ಸಮಿತಿ ಅಧ್ಯಕ್ಷ ಹರೀಶ ಕರಣಿಕ್‌, ಕಾರ್ಯಧ್ಯಕ್ಷ ಶಿವಕುಮಾರ ತಳವಾರ, ಉಪಾಧ್ಯಕ್ಷ ವಿಕ್ರಮ ಪ್ರಸಾದ, ಪ್ರಧಾನ ಕಾರ್ಯದರ್ಶಿ ಪ್ರವೀಣ ರಾಮಕೋಟೆ, ಕಾರ್ಯದರ್ಶಿ ಕಿರಣಕುಮಾರ ಚವ್ಹಾಣ ಘಟನೆ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಸ್ನೇಹಲ್‌ ಜಾಯಿ, ಬಸವರಾಜ ಮಯೂರ, ಪ್ರವೀಣಕುಮಾರ ರಾಜನ್‌, ಸುರೇಶ ಮೆಂಗನ, ಭರತ್‌ ಧನ್ನಾ, ಅನಿಲ ಚವ್ಹಾಣ, ಅನಿಲ ದೊಡ್ಡಮನಿ, ವೆಂಕಟೇಶ ಚವ್ಹಾಣ, ನರೇಂದ್ರ ದಂಡಗುಲಕರ್‌, ಜಗನ್ನಾಥ ಎಸ್‌. ಎಚ್‌, ಶಿವನಾಗ, ಆಕಾಶ ಹಿರೇಮಠ, ಶಿವರಾಜ ನಾಟೇಕಾರ, ಜಯರಾಜ, ಪಾರುಷ ಸರ್ಜಾಪುರ, ರಾಕೇಶ ಶಿರೂರಕರ್‌, ಗುರುಕೃಷ್ಣ, ರವಿಕುಮಾರ, ಚಂದು, ಉತ್ತಪ್ಪ,ಯಲ್ಲಾಲಿಂಗ ಗೋಳಾ(ಕೆ), ರೋಹಿತ ದಂಡಗುಲಕರ್ಮ ಆಕಾಶ ಪಾವನೂರ, ಕೃಷ್ಣ ರ್ಯಾಪನೂರ, ಶ್ರೀನಿವಾಸ ತಳವಾರ, ಶಂಕರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next