Advertisement

ಮರೆಗುದ್ದಿ ಗ್ರಾಮಸ್ಥರಿಂದ ಪ್ರತಿಭಟನೆ

12:15 PM Feb 12, 2020 | Suhan S |

ಜಮಖಂಡಿ: ತಾಲೂಕಿನ ಮರೆಗುದ್ದಿ ಗ್ರಾಮಸ್ಥರು ಮಂಗಳವಾರ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರು ಅಕ್ರಮ-ಸಕ್ರಮ ನಿವೇಶನದ ಹಕ್ಕುಪತ್ರ ನೀಡಲು ಸತಾಯಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಮರೆಗುದ್ದಿ ಗ್ರಾಮದ ಸರ್ವೇ ನಂ 8ರಲ್ಲಿ ಕಳೆದ 30-35 ವರ್ಷಗಳಿಂದ ವಾಸವಾಗಿದ್ದ ಸುಮಾರು 280 ಗ್ರಾಮಸ್ಥರಿಗೆ ನಿವೇಶನದ ಹಕ್ಕುಪತ್ರ ನೀಡಲು ಗ್ರಾಮ ಲೆಕ್ಕಾಧಿಕಾರಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು. ಕಂದಾಯ

ನಿರೀಕ್ಷಕರು ಕೂಡಾ ಗ್ರಾಮಸ್ಥರನ್ನು ಸತಾಯಿಸುತ್ತಿದ್ದಾರೆ. ಶೀಘ್ರದಲ್ಲಿ ನಿವೇಶನ ಹಕ್ಕುಪತ್ರ ನೀಡದಿದ್ದರೆ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಫಾತಿಮಾ ಮುಸಾಳಗಿ, ನಿಂಗವ್ವ ಉತ್ತೂರ, ಶಿವಕ್ಕ ವಾರದ, ಹಣಮಂತ ಹಡಗಲಿ, ಅಶೋಕ ಬಡಿಗೇರ, ಶಂಕರಪ್ಪ ಬಡಿಗೇರ, ವಿಠಲ ಬಡಿಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next