Advertisement

ಹದಗೆಟ್ಟ ರಸ್ತೆಯಲ್ಲಿ ಸಸಿ ನೆಟ್ಟು ಪ್ರತಿಭಟನೆ

05:23 PM Jul 12, 2022 | Team Udayavani |

ಚಿಂಚೋಳಿ: ತಾಲೂಕಿನ ನಾಗಾಇದಲಾಯಿ-ತಿರುಮಲಾಪೂರ ಗ್ರಾಮದ ಸಂಪರ್ಕ ರಸ್ತೆಯಲ್ಲಿ ಭಾರಿ ಗುಂಡಿಗಳು ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿ ಆಗುತ್ತಿರುವುದನ್ನು ಖಂಡಿಸಿ ತಾಲೂಕು ಯುವ ಕಾಂಗ್ರೆಸ್‌ ಮುಖಂಡರು ರಸ್ತೆ ತೆಗ್ಗಿನಲ್ಲಿ ಸಸಿ ನೆಟ್ಟು ಪ್ರತಿಭಟನೆ ನಡೆಸಿದರು.

Advertisement

ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ನಾಗೇಶ ಗುಣಾಣಿ ಮಾತನಾಡಿ,ತಿರುಮಲಾಪೂರ ಗ್ರಾಮಕ್ಕೆ ಮೂಲಸೌಕರ್ಯ ಇಲ್ಲದಿರುವುದು ಮತ್ತು ಜನರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾತ್ರಿ ಹಗಲಿನಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ರಸ್ತೆ ದುರಸ್ತಿಗೊಳಿಸಬೇಕೆಂದು ಅನೇಕ ಬಾರಿ ಶಾಸಕ ಡಾ|ಅವಿನಾಶ ಜಾಧವ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ಕೂಡ ಮಾಡಿದ್ದಾರೆ. ಆದರೆ ಸರಕಾರ ಇದುವರೆಗೆ ರಸ್ತೆ ನಿರ್ಮಿಸಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ವೀರೇಂದ್ರಪ್ಪ ಕಟ್ಟೋಳಿ, ಶರಣು, ವೀರಪ್ಪ ಪಾಟೀಲ, ಸಂಗಪ್ಪ ಪಾಟೀಲ, ರವಿ ಪಾಟೀಲ, ವೀರಶೆಟ್ಟಿ ಪಾಟೀಲ, ಮಲ್ಲಿಕಾರ್ಜುನ ನೆಲ್ಲಿ, ವೀರಪ್ಪ ನಾಯಕ, ರಘು ದಳಪತಿ, ಧನರಾಜ ಪಾಟೀಲ, ಮಾರುತಿ ಪೂಜಾರಿ, ಶೇಖಪ್ಪ ಪೂಜಾರಿ, ಯಲ್ಲಾಲಿಂಗ ಕಮಲಾಕರ, ಶೇಖ ಫರಿದ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next