Advertisement

ಕಡಲೆ ಬೆಳೆಗಾರರಿಂದ ಪ್ರತಿಭಟನೆ

04:03 PM Apr 13, 2022 | Team Udayavani |

ಜಗಳೂರು: ಎಲ್ಲಾ ವಿಧದ ಕಡಲೆ ಬೀಜಗಳನ್ನು ಖರೀದಿಸಬೇಕೆಂದು ಒತ್ತಾಯಿಸಿ ತಾಲೂಕಿನ ಕಡಲೆ ಬೆಳೆಗಾರರು ಕಡಲೆ ಬೀಜಗಳನ್ನು ತಾಲೂಕು ಕಚೇರಿ ಮುಂಭಾಗದಲ್ಲಿ ಕಡಲೆ ಬೀಜಗಳನ್ನು ಸುರಿದು ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದಲ್ಲಿ ಕಡಲೆ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೆ ಕೆಲವು ದಿನಗಳಿಂದ ಕಡಲೆ ಬೀಜದಲ್ಲಿ ಗುಣಮಟ್ಟದವಿಲ್ಲ ಎಂಬ ನೆಪ ಹೇಳಿ ಖರೀದಿಸುತ್ತಿಲ್ಲ. ಕಡಲೆಯಲ್ಲಿ ಕಲ್ಲು-ಮಣ್ಣು ಇರುವುದು ಸಹಜ, ಆದರೆ ಗುಣಮಟ್ಟದ ನೆಪ ಹೇಳಿ ಖರೀದಿಸದೇ ಇರುವುದು ವಿಪರ್ಯಾಸ ಎಂದು ಜಿಪಂ ಮಾಜಿ ಸದಸ್ಯ ರಾಮರೆಡ್ಡಿ ದೂರಿದರು.

ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಮಾತನಾಡಿ, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಮಾಡಬೇಡಿ. ಸಾಲ ಮಾಡಿ ವ್ಯವಸಾಯ ಮಾಡುತ್ತಿರುವ ಅವರ ಬಗ್ಗೆ ಅಧಿಕಾರಿಗಳು ಕಾಳಜಿ ತೋರಬೇಕೆಂದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಷಂಷೀರ್‌ ಅಹಮ್ಮದ್‌, ಪಪಂ ಸದಸ್ಯರಾದ ರವಿಕುಮಾರ್‌, ರಮೇಶ್‌, ಸತೀಶ್‌, ತಾನಾಜಿ, ರೇವಣಸಿದ್ದಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next