Advertisement

Srirangapatna: ಕಾವೇರಿ ಹೋರಾಟದಲ್ಲಿ ರೈತ ಪೀಳಿಗೆಯ ಚಿಣ್ಣರು

01:47 PM Sep 03, 2023 | Team Udayavani |

ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಸೆ.3ರ ಭಾನುವಾರ ಮಕ್ಕಳಿಂದ ಪ್ರತಿಭಟನೆ ನಡೆಯಿತು.

Advertisement

ಕಾವೇರಿ ನದಿಯ ಸ್ನಾನಘಟ್ಟದ ಬಳಿ ರೈತ ಮಕ್ಕಳು ಸೇರಿದಂತೆ ರೈತರು ಭಾಗವಹಿಸಿ ಕಾವೇರಿ ನೀರು ನಿಲ್ಲಿಸಲು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು.

ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ಕಾವೇರಿ ನದಿಯ ಸ್ನಾನಘಟ್ಟ ನಡೆಯುತ್ತಿರುವ ಹೋರಾಟದಲ್ಲಿ ರೈತರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದಲ್ಲಿ ವಿವಿಧ ನಾಮಫಲಕ ಹಿಡಿದು ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ಕ್ರಮವನ್ನು ಖಂಡಿಸಿ, ನಮ್ಮ ನೀರು ನಮ್ಮ ಕಾವೇರಿ ಎಂದು ಘೋಷಣೆ ಕೂಗಿದರು. ತಮಿಳುನಾಡಿಗೆ ನೀರು ಕೊಡುವುದು ನಿಲ್ಲಿಸುವಂತೆ ಒತ್ತಾಯ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next