Advertisement

ಹೊಸ ಬಾರ್ ಗೆ ಲೈಸನ್ಸ್ ನೀಡದಂತೆ ಪ್ರತಿಭಟನೆ

01:23 PM Oct 04, 2021 | Team Udayavani |

ಶ್ರೀರಂಗಪಟ್ಟಣ:  ಹೊಸ ಬಾರ್ ಗೆ ಅನುಮತಿ ನೀಡದಂತೆ ಆಗ್ರಹಿಸಿ ಶ್ರೀರಂಗಪಟ್ಟಣದಲ್ಲಿ ಅಬಕಾರಿ ಇಲಾಖೆ ಮುಂದೆ ಮಂಡ್ಯ ರಕ್ಷಣಾವೇದಿಕೆ ಕಾರ್ತಕರ್ತರು ಸೇರಿ ಕಿರಂಗೂರು ಮತ್ತು ಬಾಬುರಾಯನಕೊಪ್ಪಲು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಧರಣಿ ನಡೆಸಿದರು.

Advertisement

ಶ್ರೀರಂಗಪಟ್ಟಣ ತಾಲೂಕಿನ  ಬಾಬುರಾಯನಕೊಪ್ಪಲು ಗ್ರಾಮದ ಮೈ- ಬೆಂ ಹೆದ್ದಾರಿ ಯಲ್ಲಿ ಈಗಾಗಲೇ ಮೂರು ಬಾರ್ ಗಳಿದ್ದು ಇದೀಗ ಸಂಗೀತಾ ಬಾರ್ & ರೆಸ್ಟೋರೆಂಟ್ ಗೆ ತೆರೆಯಲು ಮುಂದಾಗಿದ್ದಾರೆ. ಇದ್ರಿಂದ ಸಾರ್ವಜನಿಕರು ಸೇರಿ ಮಹಿಳೆಯರಿಗೆ ತೊಂದರೆಯಾಗುತ್ತದೆ. ಆ ಕಾರಣದಿಂದ ಮತ್ತೊಂದು ಬಾರ್ ಗೆ ಅನುಮತಿ ನೀಡದಂತೆ ಪಟ್ಟಣದ ಅಬಕಾರಿ ಕಚೇರಿ ಮುಂದೆ ಊರಿನ ಗ್ರಾಮಸ್ಥರು ಸೇರಿ ಮ.ರ.ವೇ   ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಅಬಕಾರಿ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮ.ರ.ವೇ ಅಧ್ಯಕ್ಷ ಶಂಕರ್ ಬಾಬು, ಕಾರ್ಯಕರ್ತರಾದ ಶಿವಣ್ಣ, ದೀಪು, ಜಗದೀಶ್,ಪಿಲಿಪ್ಸ್, ಸೇರಿದಂತೆ ಕಿರಂಗೂರು ಮತ್ತು  ಬಾಬುರಾಯನಕೊಪ್ಪಲಿನ ಗ್ರಾಮಸ್ಥರು ಭಾಗವಹಿಸಿ

ಅಬಕಾರಿ ಇಸ್ಪೆಕ್ಟರ್ ಎಚ್.ಡಿ ರಮ್ಯ ಅವರಿಗೆ ಮನವಿ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next