Advertisement

ದೇಶದ್ರೋಹಿಗಳ ಗಡಿಪಾರು ಮಾಡಿ

02:20 PM Feb 23, 2020 | Suhan S |

ಯಲಬುರ್ಗಾ: ಬೆಂಗಳೂರಿನಲ್ಲಿ ನಡೆದ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಹೋರಾಟದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ದೇಶ ದ್ರೋಹಿ ಯುವತಿ ಅಮೂಲ್ಯ ಹಾಗೂ ಅರ್ದ್ರಾ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದುಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ಕರವೇ ಶಿವರಾಮೇಗೌಡ ಬಣದ ಪದಾಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಉಪತಹಶೀಲ್ದಾರ್‌ ವಿಜಯಕುಮಾರ ಗುಂಡೂರ ಅವರಿಗೆ ಮನವಿ ಸಲ್ಲಿಸಿದರು.

Advertisement

ದೇಶ ದ್ರೋಹಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು. ಮಹಿಳೆಯರಿಗೆ ಕಳಂಕ ತರುವ ರೀತಿಯಲ್ಲಿ ತುಂಬಿದ ಸಭೆಯಲ್ಲಿ, ಬೀದಿ ಬೀದಿಗಳಲ್ಲಿ, ಪಾಕ್‌ ಪರ ಘೋಷಣೆ ಕೂಗುತ್ತಿರುವ ಇಂತಹವರಿಗೆ ದೇಶದಲ್ಲಿ ಯಾವುದೇ ಭಯವಿಲ್ಲದಂತಾಗಿದೆ. ಈ ರೀತಿಯ ದೇಶ ಮತ್ತು ನಾಡ ದ್ರೋಹ ಕೆಲಸದಲ್ಲಿ ಪಾಲ್ಗೊಂಡವರಿಗೆ ಕೂಡಲೇ ಕಠಿಣ ಕ್ರಮ ಜರುಗಿಸಿ ಗಡಿಪಾರು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ರಾಜಶೇಖರ ಶ್ಯಾಗೋಟಿ, ಶಂಕರ ಮೂಲಿ, ವೀರೇಂದ್ರ ಈಳಿಗೇರ, ಶಿವರಾಜ ಚಿಕ್ಕೊಪ್ಪ, ಶರಣಕುಮಾರ ಬಡಿಗೇರ, ಮಲ್ಲೇಶ ಕುಲಕರ್ಣಿ, ಹನುಮೇಶ ಬುಡಶೆಟ್ನಾಳ, ಮಲ್ಲಪ್ಪ ಲಕ್ಕಲಕಟ್ಟಿ, ಸಿದ್ದು ಉಳ್ಳಾಗಡ್ಡಿ, ರಾಮನಗೌಡ ಭಾವಿಕಟ್ಟಿ, ರಾಮನಗೌಡ ವಟಪರ್ವಿ, ಬಸವರಾಜ ಪೂಜಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next