Advertisement

ಜನವಸತಿ,ಶಾಲೆ,ದೇಗುಲದ ಪರಿಸರದಲ್ಲಿ ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ

08:10 AM Aug 01, 2017 | Team Udayavani |

ಕುಂದಾಪುರ: ವಡೇರಹೋಬಳಿ ಗ್ರಾಮದ  ಕುಂದಾಪುರ ಪುರಸಭೆ ವ್ಯಾಪ್ತಿಯ 21ನೇ ವಾರ್ಡಿನಲ್ಲಿ   ಜನವಸತಿ , ಶಾಲಾ ವಠಾರ ಹಾಗೂ ದೇವಸ್ಥಾನದ ವ್ಯಾಪ್ತಿ ಇದ್ದರೂ ಸಹ ಮದ್ಯದಂಗಡಿಯನ್ನು  ತೆರೆಯುವ ಹುನ್ನಾರ ನಡೆಯುತ್ತಿದ್ದು , ಈ ಪ್ರದೇಶದಲ್ಲಿ   ಯಾವುದೇ ಮದ್ಯದಂಗಡಿಯನ್ನು  ತೆರೆಯದಂತೆ ಆಗ್ರಹಿಸಿ ಪರಿಸರದ  ಗ್ರಾಮಸ್ಥರು ಬಸ್ರೂರು ಮೂರು ಕೈಯಿಂದ ಪ್ರತಿಭಟನೆ ಮೆರವಣಿಗೆಯ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ  ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌ ಅವರಿಗೆ ಮನವಿ ನೀಡಿದರು.

Advertisement

ಬಸ್ರೂರು ಮೂರು ಕೈಯಿಂದ ಕೋಣಿ ಗ್ರಾಮದ ಗಡಿ ಭಾಗದ ತನಕ ಇರುವ 21ನೇ ವಾರ್ಡಿನ ವ್ಯಾಪ್ತಿಯಲ್ಲಿ  150 ಮೀಟರ್‌ ವ್ಯಾಪ್ತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ಶ್ರೀ ಗೋಪಾಲಕೃಷ್ಣ ಮಠ, ಮೂಡುಮಠ ಗೋಪಾಲಕೃಷ್ಣ ದೇವಸ್ಥಾನ, ಹುಣ್ಸೆಕಟ್ಟೆ ನಾಗಬೊಬ್ಬರ್ಯ ದೇವಸ್ಥಾನ,  ಹಾಗೂ ಸಾರ್ವಜನಿಕ ಸರಕಾರಿ ಕಿ.ಪ್ರಾ. ಶಾಲೆ, 200 ಮೀಟರ್‌ ಒಳಗೆ ಎಸ್‌.ಸಿ. ಕಾಲನಿ, 50 ಮೀ.ವ್ಯಾಪ್ತಿಯಲ್ಲಿ ಬೈಲು ಚಿಕ್ಕು ದೇವಸ್ಥಾನ  ಇದ್ದು  ಈ ಪರಿಸರದಲ್ಲಿ ಮದ್ಯದಂಗಡಿಗಳನ್ನು ತೆರೆದರೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವುದಲ್ಲದೇ  ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಹಾಗೂ ಮಹಿಳೆಯರಿಗೆ ಕಿರುಕುಳ ಉಂಟಾಗುವ ಸಾಧ್ಯತೆ ಇರುವುದರಿಂದ  ಈ ವಾರ್ಡಿನ ಗಡಿಯ ತನಕ ಯಾವುದೇ ಮದ್ಯದಂಗಡಿಯನ್ನು ತೆರೆಯದಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next