Advertisement

ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

11:02 PM May 23, 2019 | sudhir |

ಕುಂಬಳೆ: ಮರುಮತದಾನ ನಡೆದ ಪಿಲಾತರದಲ್ಲಿ ಮಾಧ್ಯಮ ವರದಿಗಾರ ಮುಜಿಬ್‌ ಮತ್ತು ಛಾಯಾ ಚಿತ್ರಗ್ರಾಹಕ ಸುನಿಲ್‌ ಕುಮಾರ್‌ರವರ ಮೇಲೆ ಸಿಪಿಎಂ ಕಾರ್ಯಕರ್ತರ ತಂಡವು ಹಲ್ಲೆ ನಡೆಸಿದ ಪ್ರಕರಣವನ್ನು ಖಂಡಿಸಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪತ್ರಕರ್ತರು ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಪ್ರೆಸ್ ಕ್ಲಬ್ ಪರಿಸರದಿಂದ ಆರಂಭಗೊಂಡ ಮೆರವಣಿಗೆಯೂ ನಗರದ ವಿವಿದೆಡೆಗಳಿಂದ ಸಾಗಿ ಸಂಪನ್ನಗೊಂಡಿತು.ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಪಿ.ಸುರೇಶನ್‌ ಉದ್ಘಾಟಿಸಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ ಶಾಫಿ ಅಧ್ಯಕ್ಷವಹಿಸಿದರು. ಪತ್ರಕರ್ತರಾದ ಮುಜಿಬ್‌, ಬಿನೋಯ್‌ಮ್ಯಾಥಯು, ರಾಜೇಶ್‌ ,ದೇವದಾಸ್‌ ಪಾರೆಕಟ್ಟೆ ಶಾಫಿ,ಅಬ್ದಲ್‌ ರೆಹಾಮನ್‌ ಆಲೂರು ಸುನಿಲ್‌ ಕುಮಾರ್‌ ಗಿರೀಶ್‌ ನೇತೃತ್ವ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next