Advertisement

Mulki: ವಿಜಾಪುರದ ರಸ್ತೆ ಸಮಸ್ಯೆಗೆ ಮೂಲ್ಕಿಯಲ್ಲಿ ಟವರ್ ಏರಿ ಪ್ರತಿಭಟನೆ!

08:03 AM Oct 01, 2023 | Team Udayavani |

ಮೂಲ್ಕಿ: ಇಲ್ಲಿಯ ಕೈಗಾರಿಕಾ ಪ್ರದೇಶದ ಶ್ರೀ ಕೊರಗಜ್ಜ ಕ್ಷೇತ್ರ ಬಳಿಯಲ್ಲಿರುವ ಮೊಬೈಲ್‌ ಟವರ್‌ ಮೇಲೇರಿದ ವ್ಯಕ್ತಿಯೋರ್ವ ನೆರೆದ ಜನರಿಗೆ, ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಸಿಬಂದಿ ಆತಂಕಗೊಳ್ಳುವಂತೆ ಮಾಡಿದ ಘಟನೆ ಶನಿವಾರ ಸಂಭವಿಸಿದೆ. ಸುಮಾರು ನಾಲ್ಕು ತಾಸುಗಳ ಬಳಿಕ ಆತ ತಾನಾಗಿಯೇ ಇಳಿಯುತ್ತಲೇ ಆತಂಕ ದೂರವಾಯಿತು.

Advertisement

ಸತೀಶ (24) ಎಂಬ ಬಿಜಾಪುರ ಜೇವರ್ಗಿ ಮೂಲದ ಯುವಕನೋರ್ವ ಬೆಳಗ್ಗೆ 9ಕ್ಕೆ ಟವರ್‌ ಮೇಲೇರುತ್ತಿರುವುದನ್ನು ನೋಡಿದ ಜನ ಪೊಲೀಸ್‌ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೈಕ್‌ ಮೂಲಕ ಆತನನ್ನು ಸಮಾಧಾನ ಪಡಿಸಿ ಹಲವು ಭರವಸೆ ಕೊಟ್ಟರೂ ಇಳಿಯುವ ಬಗ್ಗೆ ಸ್ಪಂದಿಸಲೇ ಇಲ್ಲ.

ಸುಮಾರು ನಾಲ್ಕು ತಾಸಿನ ಬಳಿಕ ಕೆಳಗಿಳಿದ ಆತ ನಮ್ಮ ಬಿಜಾಪುರ ಬಾಗಲಕೋಟೆಯಲ್ಲಿ ರಸ್ತೆ ಮತ್ತು ಇತರ ಸಮಸ್ಯೆಗಳು ಬಹಳಷ್ಟು ಇರುವುದರಿಂದ ನಾನು ಇಲ್ಲಿ ಈ ರೀತಿ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next