Advertisement

ಮಂಡಲಗೇರಿ ಶಾಲೆ ಶಿಕ್ಷಕ ವರ್ಗಾವಣೆ ವಿರೋಧಿಸಿ ಧರಣಿ

10:48 AM Jul 07, 2019 | Team Udayavani |

ಕುಕನೂರು: ತಾಲೂಕಿನ ಮಂಡಲಗೇರಿಯ ಸರ್ಕಾರಿ ಪ್ರೌಢಶಾಲೆ ಆಂಗ್ಲ ಭಾಷೆ ಶಿಕ್ಷಕ ನಾಗರಾಜ ಜಗತಾಪ ಅವರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು ವಾಹನ ಅಡ್ಡಗಟ್ಟಿ ಪ್ರತಿಭಟಿಸಿದರು.

Advertisement

ಶಿಕ್ಷಕ ನಾಗರಾಜ ಜಗತಾಪ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು ಜು.1ರಿಂದ ತರಗತಿ ಬಹಿಷ್ಕರಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಕನ ವರ್ಗಾವಣೆ ರದ್ದತಿಗೆ ಕೈ ಜೋಡಿಸಬೇಕೆಂದು ಗ್ರಾಪಂಗೆ ಮನವಿ ಮಾಡಿದ್ದಾರೆ. ಮಕ್ಕಳ ಪ್ರತಿಭಟನೆಯಿಂದ ಮಂಡಲಗೇರಿ ಗ್ರಾಮದಲ್ಲಿ ವಾಹನ, ಬಸ್‌ಗಳ ಸಂಚಾರಕ್ಕೆ ಕೆಲ ಹೊತ್ತು ತೊಂದರೆ ಆಗಿತ್ತು. ನಂತರ ಪೊಲೀಸರ ನೇತೃತ್ವದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.

ಸ್ಥಳಕ್ಕಾಗಮಿಸಿದ ಬಿಇಒ ಶರಣಪ್ಪ ವಟಗಲ್ಲ, ಬಿಆರ್‌ಸಿ ಮಲ್ಲಿಕಾರ್ಜುನ ಬೇಲೇರಿ, ಎಸ್‌ಡಿಎಂಸಿ ಅಧ್ಯಕ್ಷ ವೀರಣ್ಣ ಮೇಟಿ ಮಕ್ಕಳ ಪ್ರತಿಭಟನೆ ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next