Advertisement

Protest: ಕಾರಜೋಳ ವಿರುದ್ಧ ಪ್ರತಿಭಟನೆ: 13 ಜನರ ವಿರುದ್ಧ ದೂರು ದಾಖಲು

11:42 PM Mar 30, 2024 | Suhan S |

ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ಧ ಪ್ರತಿಭಟನೆ ನಡೆಸಿದ್ದ 13 ಜನರ ವಿರುದ್ಧ ಚಿತ್ರದುರ್ಗ ನಗರದ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಬಿಜೆಪಿ ಟಿಕೆಟ್‌ ಆಕಾಂಕ್ಷಿ ರಘುಚಂದನ್‌ ಬೆಂಬಲಿಗರು ಗೋವಿಂದ ಕಾರಜೋಳ ವಿರುದ್ಧ ಗೋ ಬ್ಯಾಕ್‌ ಪ್ರತಿಭಟನೆ ನಡೆಸಲು ಶುಕ್ರವಾರ ಸಂಜೆ ಚಳ್ಳಕೆರೆ ಗೇಟ್‌ ಬಳಿ ಜಮಾಯಿಸಿದ್ದರು. ಈ ವೇಳೆ ಕಾರೊಂದರಲ್ಲಿ ಮೊಟ್ಟೆ, ಕಪ್ಪು ಬಾವುಟಗಳಿರುವುದನ್ನು ಚುನಾವಣ ನೀತಿಸಂಹಿತೆ ಪಾಲನೆಯಲ್ಲಿದ್ದ ಸಿಬಂದಿ  ಗಮನಿಸಿದ್ದು, ತತ್‌ಕ್ಷಣ ಕಾರನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗಿದೆ. ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ರಘುಚಂದನ್‌ ಬೆಂಬಲಿಗರು ರಸ್ತೆಯಲ್ಲಿ ಕುಳಿತು ಗೋ ಬ್ಯಾಕ್‌ ಘೋಷಣೆ ಕೂಗಿದ್ದಾರೆ. ಘಟನೆ ಬಗ್ಗೆ ಎಫ್‌ಎಸ್‌ಟಿ ಸಿಬಂದಿ ಹೇಮಂತ್‌ರಾಜು ಬಡಾವಣೆ ಠಾಣೆಯಲ್ಲಿ ನವೀನ್‌, ಅಂಜಿನಪ್ಪ, ಚೇತನ, ತಿಮ್ಮಯ್ಯ, ಸುನೀಲ್‌, ಹುಸೇನ್‌, ಹರೀಶ್‌, ಭೂತೇಶ್‌, ಆನಂದ, ಭರತೇಶ, ವೀರೇಶ, ಶಶಿಧರ, ಕೊಟ್ರೇಶ್‌ ಸಹಿತ 13 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next