Advertisement

ಆರದ ಸಿಎಎ-ಎನ್‌ಆರ್‌ಸಿ ಕಾವು

10:49 AM Jan 03, 2020 | Suhan S |

ಹುಬ್ಬಳ್ಳಿ: ದೇಶದ ಭದ್ರತೆ ದೃಷ್ಟಿಯಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲೇಬೇಕು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ “ತಿರಂಗಾ ಯಾತ್ರೆ’ ಮಾಡುವ ಮೂಲಕ ಕಾಯ್ದೆಗೆ ಬೆಂಬಲ ಸೂಚಿಸಿತು. ವಿದ್ಯಾನಗರ ಬಿವಿಬಿ ಎಂಜಿನಿಯರಿಂಗ್‌ ಕಾಲೇಜು ಆವರಣದಿಂದ ರಾಯಣ್ಣ ವೃತ್ತದ ವರೆಗೆ ಜಾಗೃತಿ ಜಾಥಾ ನಡೆಸಿದ ಸಾವಿರಾರು ವಿದ್ಯಾರ್ಥಿಗಳು ಬಸವವನದಿಂದ ತಿರಂಗಾ ಯಾತ್ರೆ ನಡೆಸಿ ದೇಶದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಘೋಷಣೆ ಮೊಳಗಿಸಿದರು. ರಾಯಣ್ಣ ವೃತ್ತದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸೆ, ದೇಶದಲ್ಲಿ ಅಕ್ರಮ ನಸುಳುಕೋರರಿದ್ದು, ಅವರನ್ನು ಹೊರ ಹಾಕಬೇಕಾಗಿದೆ. ಆದ್ದರಿಂದ ಸಿಎಎ-ಎನ್‌ಆರ್‌ಸಿ ಜಾರಿಯಾಗಲೇಬೇಕು ಎಂದರು.

Advertisement

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ದೇಶದಲ್ಲಿ ನಾವು ಭಾರತೀಯರು ಎಂದು ಹೇಳಿಕೊಳ್ಳಲು ಒಂದು ಗುರುತು ನೀಡಲು ಹೊರಟರೆ ಅದಕ್ಕೆ ಆಕ್ಷೇಪಗಳು ಕೇಳಿ ಬರುತ್ತವೆ. ನಾವೆಲ್ಲರೂ ಒಕ್ಕೊರಲಿನಿಂದ ಸಿಎಎ ಹಾಗೂ ಎನ್‌ಆರ್‌ಸಿಯನ್ನು ಬೆಂಬಲಿಸೋಣ ಎಂದು ಹೇಳಿದರು. ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಮಾತನಾಡಿ, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಹೊರಟರೆ ಕೆಲವರು ವಿರೋಧಿಸುವ ಮೂಲಕ ಗಲಭೆ ಸೃಷ್ಟಿಸಲು ಮುಂದಾಗುತ್ತಾರೆ ಇದು ಸರಿಯಲ್ಲ ಎಂದರು.

ಡಾ| ಪುನೀತಕುಮಾರ, ಸ್ವಾತಿ, ಪ್ರತೀಕ ಮಾಳಿ, ರಮೇಶ ಮೊದಲಾದವರು ಮಾತನಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next