Advertisement

ಬಾರ್‌ಗೆ ಪರವಾನಿಗೆ ವಿರುದ್ಧ ಪ್ರತಿಭಟನೆ

12:35 AM Feb 10, 2019 | Team Udayavani |

ಕಾಪು: ಧಾರ್ಮಿಕ, ಶೆ„ಕ್ಷಣಿಕ ಕೇಂದ್ರಗಳು ಹಾಗೂ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಎಸ್‌ಡಿಪಿಐ ಕಾಪು ಕ್ಷೇತ್ರ ಸಮಿತಿಯ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

Advertisement

ಉಡುಪಿ ಜಿಲ್ಲಾ ಎಸ್‌ಡಿಪಿಐ ಉಪಾಧ್ಯಕ್ಷ ಅಬ್ದುಲ್‌ ರಹಿಮಾನ್‌ ಮಲ್ಪೆ ಮಾತನಾಡಿ, ಇಲ್ಲಿ ಬಾರ್‌ ಪ್ರಾರಂಭಿಸಲು ಅವಕಾಶ ನೀಡುವುದರಿಂದ ನೆಮ್ಮದಿ ಹಾಳಾಗಲಿದೆ. ಕೂಡಲೇ ಪರವಾನಿಗೆ ರದ್ದುಮಾಡಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಅಶ್ವನ್‌ ಸಾಧಿಕ್‌, ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್‌ ಕಟಪಾಡಿ, ಪಿಎಫ್‌ಐ ಪಡುಬಿದ್ರಿ ಡಿವಿಜನ್‌ ಅಧ್ಯಕ್ಷ ಮಜೀದ್‌ ಉಚ್ಚಿಲ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಹನೀಫ್‌ ಮೂಳೂರು, ಕಾಪು ಕ್ಷೇತ್ರ ಎಸ್‌ಡಿಪಿಐ ಅಧ್ಯಕ್ಷ ಅಬ್ರಾರ್‌ ಉಚ್ಚಿಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next